PLACE YOUR AD HERE AT LOWEST PRICE
ಕೋಲಾರ:ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಶಾಸಕ ಬಿ.ವೈ ವಿಜಯೇಂದ್ರ ಕರ್ನಾಟಕದ ಮೂಡಲಬಾಗಲಿನ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಭೇಟಿ ಪೂಜೆ ಸಲ್ಲಿಸಿದರು.
ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಬಿ.ವೈ ವಿಜಯೇಂದ್ರ ಆಗಮಿಸಿದ ವೇಳೆ ಸಂಸದ ಎಸ್. ಮುನಿಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ರಾಜಕೀಯ ಶಕ್ತಿ ಪೀಠ ಎಂದು ಹೆಸರುವಾಸಿ ಆಗಿರುವ ಕುರುಡು ಮಲೆ ಗಣೇಶ ದೇವರ ದರ್ಶನಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರ ಪೂಜೆ ಸಲ್ಲಿಸಿದರು.
ಯಾವುದೇ ಕಾರ್ಯ ಆರಂಭ ಮಾಡುವ ಮುನ್ನ ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸುವ ಪ್ರವೃತ್ತಿಯನ್ನು ಕರ್ನಾಟಕದ ರಾಜಕೀಯ ಪಕ್ಷಗಳ ವಾಡಿಕೆ ಮಾಡಿಕೊಂಡಿವೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕಾರಿಣಿಗಳಿಗೆ ಕುರುಡುಮಲೆ ಗಣೇಶನ ಗುಡಿ ನಂಬಿಕೆಯ ದೇವಸ್ಥಾನ. ತಂದೆ ಯಡಿಯೂರಪ್ಪ ಸೂಚನೆ ಮೇರೆಗೆ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ವಿಜಯೇಂದ್ರ ಭೇಟಿ ನೀಡಿದ್ದರು.
ಇದೇ ವೇಳೆ ವಿಜಯೇಂದ್ರರವರು ಕಾರ್ಯಕರ್ತರ ಜೊತೆಗೆ ಮುಳಬಾಗಿಲು ದೋಸೆ ಸವಿದರು.
ಈ ಸಂದರ್ಭದಲ್ಲಿ ಸಂಸದರಾದ ಎಸ್.ಮುನಿಸ್ವಾಮಿ, ಪಿ.ಸಿ ಮೋಹನ್, ಮಾಜಿ ಶಾಸಕರಾದ ಬಿಪಿ ವೆಂಕಟ ಮುನಿಯಪ್ಪ, ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಕೆ.ಚಂದ್ರಾರೆಡ್ಡಿ . ಬಿ.ವಿ.ಮಹೇಶ್ , ನಂಗಲಿ ಸುಂದರ್ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು .