PLACE YOUR AD HERE AT LOWEST PRICE
ಬಂಗಾರಪೇಟೆ:ಪ್ರಧಾನಿ ನರೇಂದ್ರ ಮೋದಿರ ನೇತೃತ್ವದ ಸರ್ಕಾರದಲ್ಲಿ ದೇಶದ ಜನತೆಗೆ ಆಗಿರುವ ಅನುಕೂಲತೆಗಳ ಬಗ್ಗೆ ಪ್ರಚಾರ ಮಾಡುವ ಸಲುವಾಗಿ ಬಿಜೆಪಿ ಪಕ್ಷದವತಿಯಿಂದ ದೇಶಾದ್ಯಂತ ಗಾಂವ್ ಚಲೋ ಅಭಿಯಾನ ಮಾಡಲಾಗುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಗೋಡೆ ಬರಹ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ದೇಶದ ಸಮಗ್ರ ಜನತೆಗೆ ಭದ್ರತೆಯ ಜೊತೆಗೆ ಸ್ವಯಂ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದೆ. ಇದರಿಂದ ಬಹುತೇಕ ಜನತೆಗೆ ಸೌಲಭ್ಯಗಳು ದೊರೆತಿವೆ ಎಂದರು.
ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿ ‘ಗಾಂವ್ ಚಲೋ’ ಅಭಿಯಾನ ಪ್ರಾರಂಭಿಸಲಾಗಿದೆ. ಬೂತ್ ಗೆದ್ದು ಕ್ಷೇತ್ರ ಗೆಲ್ಲಬೇಕೆಂಬುದು ಬಿಜೆಪಿ ಚುನಾವಣಾ ಧ್ಯೇಯ ವಾಕ್ಯ. ಒಟ್ಟಾರೆ ಬೂತ್ ಸಶಕ್ತೀಕರಣ ಅಭಿಯಾನದ ಉದ್ದೇಶವಾಗಿದೆ. ರಾಜ್ಯದಲ್ಲಿ ಅಭಿಯಾನ ಯಶಸ್ವಿಗೊಳಿಸಿ 28 ಕ್ಷೇತ್ರವನ್ನೂ ಗೆಲ್ಲುವ ಪ್ರಯತ್ನವನ್ನು ನಡೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಸಂಪಂಗಿರೆಡ್ಡಿ, ನಗರಾಧ್ಯಕ್ಷ ಶಶಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾಸ ಪ್ರಸನ್ನಕುಮಾರ್, ಅಮರೆಶ್, ಮುಖಂಡರಾದ ಬಿ.ಪಿ ಮಹೇಶ್, ಕರವೇ ಚಲಪತಿ, ವಿನೋದ್ ಕುಮಾರ್, ಕುಂಬಾರಪಾಳ್ಯ ಅನಿಲ್ ಕುಮಾರ್, ಮುರುಗೇಶ್, ರವಿ, ಗಂಗಾಧರ್, ದಿಸೈರಾಜ್ ಮೊದಲಾದವರಿದ್ದರು.