• Sat. Apr 27th, 2024

ಪರಿಶಿಷ್ಟರನ್ನು ಎಡಗೈ ಬಲಗೈ ಎಂದು ಒಡೆಯುತ್ತಿರುವವರಿಗೆ ಧಿಕ್ಕಾರ:ಸೂಲಿಕುಟೆ  ಆನಂದ್.

PLACE YOUR AD HERE AT LOWEST PRICE

ಬಂಗಾರಪೇಟೆ:ಲೋಕಸಭಾ ಚುನಾವಣೆ ವೇಳೆ ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಿಶಿಷ್ಟರಲ್ಲಿ ಎಡಗೈ ಬಲಗೈ ಎಂದು ಒಡಕು ಮೂಡಿಸಲು ಮುಂದಾಗುತ್ತಿರುವುದು ಅಕ್ಷಮ್ಯವಾಗಿದ್ದು ಇಂಥಹ ನಾಯಕರ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾದ್ಯಕ್ಷ ಸೂಲಿಕುಂಟೆ ಆನಂದ ಹೇಳಿದರು.

ಪಟ್ಟಣದಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು ಕೆಲ ರಾಜಕಾರಣಿಗಳು ನಮ್ಮ ಪರಿಶಿಷ್ಟ ಜಾತಿಗಳ ಒಗ್ಗಟ್ಟನ್ನು ಮುರಿಯುವ ದುರುದ್ದೇಶದಿಂದ ನಮ್ಮಲ್ಲಿ ಒಡಕು ತರುವ ದುರುದ್ದೇಶದಿಂದ ಎಡಗೈ ಬಲಗೈ ಚಿಕ್ಕತಾಳಿ ದೊಡ್ಡತಾಳಿ ಎಂದು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರು ವಿಷ ಕುಡಿದು ನಮಗೆ ಅಮೃತ ಉಣಿಸಿದ್ದಾರೆ. ಅವರು ಕೊಟ್ಟಿರುವ ಸಂವಿಧಾನದ ಫಲ ಉಣ್ಣುತ್ತಿರುವ ಪ್ರತಿಯೊಬ್ಬರೂ ಈ ರಾಜಕಾರಿಗಳ ನಡೆಯನ್ನು ಖಂಡಿಸಬೇಕು. ಒಂದೇ ತಾಯಿಯ ಮಕ್ಕಳಂತಿರುವ ನಮ್ಮಗಳ ಮದ್ಯೆ ವಿಷ ಬೀಜ ಬಿತ್ತುವ ಹುನ್ನಾರವನ್ನು ಎಲ್ಲರೂ ಪ್ರಶ್ನಿಸಬೇಕು ಎಂದರು.

ಎಡಗೈ ಬಲಗೈ ಜನ ಮೂಲನಿವಾಸಿಗಳು. ದೇಶವನ್ನು ಕಟ್ಟಿದವರು ನಾವು. ಈ ದೇಶದ ಅಡಿಪಾಯಗಳು ನಾವು. ಬಾಬಾ ಸಾಹೇಬರ ಅನುಯಾಯಿಗಳು ನಾವಾಗಿದ್ದೇವೆ. ಕೆಲ ರಾಜಕಾರಿಗಳು ತಮ್ಮ ತೆವಲಿಗೊಸ್ಕರ ನಮ್ಮಲ್ಲೇ ಒಡಕು ಮೂಡಿಸಲು ಪ್ರಯತ್ನಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.

ಈ ಬಗ್ಗೆ ರಾಜ್ಯದಾದ್ಯಂತ ಇರುವ ದಲಿತಪರ ಸಂಘಟನೆಗಳು ತಕ್ಷಣ ಪ್ರತಿಕ್ರಿಯಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಎಲ್ಲಾ ಸಂಘಟನೆಗಳ ರಾಜ್ಯ ಮುಖಂಡರು ಪ್ರತಿಕ್ರಿಯಿಸಿ ಈ ಹುನ್ನಾರದ ಬಗ್ಗೆ ಪ್ರಶ್ನಿಸಿ ಒಡಕು ಮೂಡಿಸಲು ಮುಂದಾಗುತ್ತಿರುವವರಿಗೆ ಬುದ್ದಿ ಕಲಿಸಬೇಕು ಎಂದು ಮನವಿ ಮಾಡಿದರು.

ರಾಜಕಾರಣಿಗಳು ಅವರ ನಾಯಕರಿಗೆ ಅಥವಾ ಹಿಂಬಾಲಕರಿಗೆ ಟಿಕೆಟ್ ಕೊಡಿಸಲು ಮಾಡುವ ಪ್ರಯತ್ನಗಳಿಗೆ ನಮ್ಮ ಅಬ್ಯಂತರವಿಲ್ಲ. ಎಡಗೈ ಬಲಗೈ ದೊಡ್ಡತಾಳಿ ಚಿಕ್ಕತಾಳಿ ಎಂಬ ಹೆಸರೆತ್ತುವುದರ ಬಗ್ಗೆ ನಮ್ಮ ಅಬ್ಯಂತರವಿದೆ. ರಾಜಕಾರಣಿಗಳು ಈ ರೀತಿ ತಾರತಮ್ಯ ಮಾಡುವುದನ್ನು ಈ ಕೂಡಲೆ ನಿಲ್ಲಿಸಿದಿದ್ದರೆ ಅವರ ಮನೆಗಳ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಜಿಲ್ಲಾದ್ಯಕ್ಷ ಗೌತಮ್, ತಾಲ್ಲೂಕು ಕಾರ್ಯಾದ್ಯಕ್ಷ ಎಸ್.ವಿ.ಮಂಜು, ಮುಖಂಡರಾದ ಭಾಗ್ಯರಾಜ್, ಪ್ರವೀಣ್ ಚಕ್ರವರ್ತಿ, ಸಿಜಾಮಿಲ್ ಬಾಷಾ, ಐಯ್ಯಪ್ಪ ಮೊದಲಾದವರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!