ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರ, ಮಾ.25. : ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರರ 298 ನೇ ಜಯಂತಿಯನ್ನು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಇರುವ ಕಾರಣ ಕೈವಾರ ತಾತಯ್ಯನವರ ಭಾವ ಚಿತ್ರಕ್ಕೆ ಬಲಿಜ ಸಮುದಾಯದ ಮುಖಂಡರು ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರ ಬಲಿಜ ಸಮುದಾಯದ ಮುಖಂಡರುಗಳು ನೆರವೇರಿಸಿ ಮಾತನಾಡಿ ಸಮುದಾಯ ಹಲವು ಒಳ ಪಂಗಡಗಳಿಂದ ಹರಿದು ಹಂಚಿಹೋಗಿದ್ದು, ಸಮುದಾಯದ ಜನಸಂಖ್ಯೆ ಬಗ್ಗೆ ಸರ್ಕಾರದಲ್ಲೂ ಯಾವುದೇ ನಿಖರವಾದ ಅಂಕಿ ಅಂಶ ಇಲ್ಲವಾಗಿದೆ.ಜನಾಂಗದ ಒಗ್ಗಟ್ಟು ಪ್ರದರ್ಶನ ಅಗತ್ಯ ಇರುವುದರಿಂದ ರಾಜ್ಯದಲ್ಲಿ ಬಲಿಜ ಜನಾಂಗದ ನಿಖರವಾದ ಮಾಹಿತಿ ಸಿಗಲು ಮುಂದಿನ ಯಾವುದೇ ಜನಗಣತಿಯಲ್ಲಿ ” ಬಲಿಜ” ಎಂದು ನಮೂದಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮಗಳನ್ನು ಆಯೋಜಿಸಲು ಆರ್ಥಿಕ ವಾಗಿ ಸದೃಡವಾಗಲು ಜಿಲ್ಲಾ ಸಂಘ ಕನಿಷ್ಟ ಪ್ರತಿ ತಿಂಗಳು ಸಭೆ ನಡೆಸುವುದಲ್ಲದೆ ಪ್ರತಿ ಹೋಬಳಿ ಮಟ್ಟಕ್ಕೆ ಹಾಗೂ ತಾಲ್ಲೂಕಿಗೆ ಸಂಚಾಲಕರನ್ನಾಗಿ ನೇಮಿಸಿ ಪ್ರತಿಯೊಬ್ಬ ಸದಸ್ಯರಿಂದ ಕನಿಷ್ಠ ತಿಂಗಳಿಗೆ 10 ರೂ ದೇಣಿಗೆ ಪಡೆಯುವಂತೆ ಸಲಹೆ ನೀಡಿದರು. ತಾತಯ್ಯನವರ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾನವ ಜನ್ಮಸಾರ್ಥಕತೆ ಮಾಡಿಕೊಳ್ಳಲು ಮನವಿ ಮಾಡಿದರಲ್ಲದೆ ಗುಂಪುಗಾರಿಕೆ ಬಿಟ್ಟು ಒಂದಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವಂತೆ ಕೋರಿದರು. ಕಾರ್ಯಕ್ರಮದ ಮೊದಲು ನಗರದ ಟೇಕಲ್ ರಸ್ತೆಯಲ್ಲಿರುವ ಯೋಗಿನಾರೇಯಣ ಯತೀಂದ್ರರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಬಲಿಜ ಸಮುದಾಯದ ಮುಖಂಡ ಹಾಗೂ ಯೋಗಿ ನಾರಾಯಣ ಬಲಿಜ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಪ್ರಸಾದ್ ನೆರವೇರಿಸಿದರು ಸಮುದಾಯದ ಮುಖಂಡ ಹಾಗೂ ನಿವೃತ್ತ ಪೋಲಿಸ್ ಅಧಿಕಾರಿ ವೆಂಕಟಸ್ವಾಮಿ ತಂಡ ತಾತಯ್ಯನವರ ಭಜನೆಯನ್ನು ನೆರವೇರಿಸಿ ನರೆದಿದ್ದ ಜನರಿಗೆ ಭಕ್ತಿಸಾರವನ್ನು ಹಂಚಿದರು.
ಕಾರ್ಯಕ್ರಮದಲ್ಲಿ ಬಲಿಜ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರ ಕುಮಾರ್, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಸದಸ್ಯ ರಘ ಉರ್ಫ್ ಚಿಟ್ಟಿ,ಸಮುದಾಯದ ಮುಖಂಡರುಗಳಾದ ರಂಗನಾಥ್,ಎಸ್.ಎಸ್.ಶ್ರೀಧರ್,ಪುಷ್ಠಿ ನಾರಾಯಣ ಸ್ವಾಮಿ,ಸಿ.ಟಿ.ಓ ರಾಜೇಶ್, ಮಹೇಶ್ ಬಾಬು,ಎಂ.ಜಿ.ಮಂಜುನಾಥ್, ಎಸ್.ಸುರೇಶ್, ಬಾಲಾಜಿ, ಬಾಬಾ,ಚಲಪತಿ,ಕೆ.ವಿ.ರುಕ್ಮಾಂಗದ, ಕಿಟ್ಟಣ್ಣ,ಶ್ರೀನಿವಸ್,ಗೋವರ್ಧನ್ ಹಾಗೂ ಸಮುದಾಯದ ಅನೇಕ ಮುಖಂಡರುಗಳು ಭಾಗವಹಿಸಿದ್ದರು.