• Mon. Apr 29th, 2024

PLACE YOUR AD HERE AT LOWEST PRICE

ಬೆಂಗಳೂರಿನಲ್ಲಿ ಕಾಂಗ್ರೇಸ್ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೆ ವಾಲ ಮತ್ತು ಸುಧಾಮ ದಾಸ್ ಜೊತೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್  ನೇತೃತ್ವದ ತಂಡ ಚರ್ಛೆ ನಡೆಸಿತು.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿ ಅಭ್ಯರ್ಥಿಗಳನ್ನ ಗೆಲ್ಲಿಸಲು ಈ ಸಮಾಲೋಚನೆ ಸಭೆಯಲ್ಲಿ ಚರ್ಛೆಗಳು ನಡೆಸಲಾಯಿತು.

ಈ ಹಿಂದೆಯೂ ಸಹ ವಿಧಾನಸಭಾ ಚುನಾವಣೆಯಲ್ಲಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ   ಬೆಂಬಲದಿಂದ 36 ಕಡೆ ಎಂಎಲ್ಎ ಗೆಲ್ಲಲು ಬಹು ಮುಖ್ಯ ಪಾತ್ರ ವಹಿಸಲಾಗಿತ್ತು ಎಂಬುದನ್ನು ಸೂರ್ಜೆ ವಾಲರ ಗಮನಕ್ಕೆ ತರಲಾಯಿತು.

 

ಉತ್ತರ ಕರ್ನಾಟಕದ ಮತ್ತು ಬಯಲು ಸೀಮೆಗಳಾದ ಚಿತ್ರದುರ್ಗ ತುಮಕೂರ್ ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಸುರ್ಜೆವಾಲಾ ಕೋರಿದರು.

ಈ ಬಗ್ಗೆ ನಾನೇ ಸ್ವತಃ ಅಭ್ಯರ್ಥಿಗಳ ಬಳಿ ಮಾತನಾಡಿ ನಿಮ್ಮ ಸಹಾಯವನ್ನು ಪಡೆಯಲು ಸೂಚಿಸುತ್ತೇನೆ ಎಂದು ನಿಯೋಹಗಕ್ಕೆ ಇದೇ ವೇಳೆ ಸುರ್ಜೆವಾಲಾ ತಿಳಿಸಿದರು.

ಈ ವೇಳೆ ರಾಜ್ಯ ಸಂಘಟನಾ ಸಂಚಾಲಕರಾದ ಸೂಲಿಕುಂಟೆ ರಮೇಶ್ ಚಿಂತಾಮಣಿಯ ವಿಜಯ ನರಸಿಂಹ ಭೀಮ ಜ್ಯೋತಿ ಸೀನು ಕೋಲಾರ ಜಿಲ್ಲೆಯ ಪದಾಧಿಕಾರಿಗಳಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!