• Fri. Apr 26th, 2024

ಕೋಲಾರ I ಚುನಾವಣಾ ನಿಲುವು ಕೈಗೊಳ್ಳಲು ಫೆ.೩ ದಲಿತ ಮುಖಂಡರ ಸಭೆ – ಕಾಂಗ್ರೆಸ್‌ ಘಟಬಂಧನ್‌ ಮುಖಂಡರು ವಿರುದ್ಧ ಆಕ್ರೋಶ

PLACE YOUR AD HERE AT LOWEST PRICE

  • ಘಟಬಂದನ್ ಮುಖಂಡರ ನಿಲುವಿಗೆ ದಲಿತ ಸಂಘಟನೆಗಳ ವಿರೋಧ
    ಫೆ.೩ರಂದು ಅಂತಿಮ ನಿರ್ಧಾರಕ್ಕೆ ಸಭೆ ನಡೆಸಲು ತೀರ್ಮಾನ

ಕಾಂಗ್ರೆಸ್ ಘಟಬಂದನ್ ಮುಖಂಡರು ಮತ್ತು ಕೆಲ ದಲಿತ ಮುಖಂಡರು ಒಗ್ಗೂಡಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ದಲಿತ ವಿರೋಧಿಯಾಗಿದ್ದು ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲು ದಲಿತ ಸಂಘಟನೆಗಳ ಮುಖಂಡರು ನಿರ್ಧರಿಸಿದರು.

ಕೋಲಾರದ ಕುವೆಂಪು ನಗರದ ರೈತ ಸಂಘದ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ೬೦ ಮಂದಿ ಮುಖಂಡರು ಭಾಗವಹಿಸಿದ್ದು, ಘಟಬಂಧನ್ ತಂಡದವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದು ನಾನೇ ಸೋಲಿಸಿದ್ದು ಎಂದು ಕೆಲವರು ಸಂಭ್ರಮಾಚರಣೆ ನಡೆಸಿದ್ದು ಜಗಜ್ಜಾಹೀರು ಆಗಿರುವಾಗ ಇದೀಗ ಅದೇ ತಂಡದವರು ದಲಿತ ಜನಾಂಗದ ಪರವಾಗಿ ನಿಲುವುಗಳನ್ನು ಕೈಗೊಳ್ಳುತ್ತಿರುವುದು ಸಮಂಜಸವಲ್ಲವೆಂದು ದೂರಿದರು.

ಇದೀಗ ಅದೇ ಘಟಬಂದನ್ ಮುಖಂಡರು ಕೆಲ ದಲಿತ ಮುಖಂಡರೊಡನೆ ಕೈ ಜೋಡಿಸಿ ತಾವು ಹೇಳಿದ್ದೆ ಅಂತಿಮ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ರಾಜಕಾರಣವನ್ನು ಕಲುಷಿತ ಮಾಡುವ ಮೂಲಕ ಏಕಚಕ್ರಾಧಿಪತ್ಯ ಸ್ಥಾಪಿಸಲು ಮುಂದಾಗಿದ್ದು ಇದಕ್ಕೆ ಅವಕಾಶ ನೀಡಬಾರದು. ಎಸ್ಸಿ, ಎಸ್ಟಿ ಓಟುಗಳು ಕೆಲವರ ಜೇಬಿನಲ್ಲಿದೆ ಎಂಬಂತೆ ಆಡುತ್ತಿದ್ದು ಅಹಿಂದ ಮತದಾರರು ದಡ್ಡರು ಎಂಬಂತೆ ಅವರ ಪರವಾಗಿ ಘಟಬಂದನ್ ತಂಡದವರು ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಇಡೀ ಅಹಿಂದ ವರ್ಗಕ್ಕೆ ಅಪಮಾನ ಮಾಡುತ್ತಿದ್ದು ಈ ಮೂಲಕ ದಲಿತರಿಗೆ ಸವಾಲು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಘಟಬಂದನ್ ಮುಖಂಡರು ಹೇಳಿದಂತೆ ದಲಿತರು ಜೆಡಿಎಸ್-ಕಾಂಗ್ರೆಸ್-ಬಿಜೆಪಿಗೆ ಮತ ಹಾಕಿದ್ದು ಇವರಿಂದ ಜನಾಂಗಕ್ಕೆ ಏನು ಲಾಭವಾಗಿದೆ? ನಾವು ಹೇಳಿದ್ದೇ ಅಂತಿಮ ಎಂಬಂತೆ ಭಂಡಧೈರ್ಯ ತೋರುತ್ತಿರುವ ಮುಖಂಡರನ್ನು ಬಹಿಷ್ಕರಿಸುವ ಸಂಬಂಧ ಫೆಬ್ರವರಿ ೩ ರಂದು ಮತ್ತೊಂದು ಸಭೆ ನಡೆಸುವ ಮೂಲಕ ಘಟಬಂದನ್‌ಗೆ ಕಡಿವಾಣ ಹಾಕಲು ಮತ್ತು ಚುನಾವಣೆ ಸಂಬಂಧಿಸಿದಂತೆ ಚರ್ಚಿಸಲು ದಲಿತ ಸಂಘಟನೆಗಳ ಮುಖಂಡರು ನಿರ್ಧಾರಿಸಲಾಯಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!