ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಂದಿವಾರಿಪಲ್ಲಿ ಗ್ರಾಮದ ಹೊರ ಹೊಲಯದಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳರ ಕೈಚಳಕದಿಂದ ದೇವಾಲಯ ಕಳ್ಳತನವಾಗಿದೆ .
ಇಂದು ಬೆಳಗಿನ ಜಾವ ಭಕ್ತಾದಿಗಳು ಎಂದಿನಂತೆ ಪೂಜೆಗೆಂದು ದೇವಸ್ಥಾನದ ಬಳಿ ಹೋದಾಗ ದೇವಸ್ಥಾನದ ಬಾಗಿಲು ಬೀಗ ಮುರಿದುರಿವುದು ಕಂಡು ಬಂದಿದ್ದು ತಕ್ಷಣ ದಿನನಿತ್ಯ ಪೂಜೆ ಮಾಡುವವರು ಹಾಗೂ ದೇವಸ್ಥಾನದ ಸಂಸ್ಥಾಪಕರ ಮೊಮ್ಮಗನಾದ ಗ್ರಾಮದ ನಿವಾಸಿ ಶ್ರೀನಿವಾಸ್ ಎಂಬುವವರಿಗೆ ತಿಳಿಸಿರುತಾರೆ.
ಕೊಡಲೇ ಭೇಟಿ ನೀಡಿ ಪರಿಶಿಲನೆ ಮಾಡಿದಾಗ ಹುಂಡಿ ಹೊಡೆದು ಹಣ ದೋಚಿರುವದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಘಟನೆ ಕುರಿತು ರಾಯಲ್ಪಾಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವಂತಹ ರಾಯಲ್ಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿ ಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳಿಗಾಗಿ ಬಳೆಬೀಸಿದ್ದಾರೆ.