• Fri. Apr 26th, 2024

PLACE YOUR AD HERE AT LOWEST PRICE

ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ನಮ್ಮ ರಾಷ್ಟ್ರದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಓಂಶಕ್ತಿ ಫೌಂಡೇಶನ್ ವತಿಯಿಂದ ಮಂಗಳವಾರ ಮೇಣದ ಬತ್ತಿ ಬೆಳಗಿಸುವ ಮೂಲಕ ಪುಲ್ವಾಮ ವೀರ ಸೈನಿಕರನ್ನು ಸ್ಮರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಓಂಶಕ್ತಿ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ ಮಾತನಾಡಿ ಪುಲ್ವಾಮ ದಾಳಿಯಾಗಿ ನಾಲ್ಕು ವರ್ಷಗಳಾಗಿದೆ ಅಂದಿನಿಂದ ಇಂದಿನವರೆಗೂ ಯಾವುದೇ ದಾಳಿಗಳು ನಡೆಯದಂತೆ ದೇಶದ ಪ್ರಧಾನಿ ಕಾವಲುಗಾರನ ರೀತಿಯಲ್ಲಿ ನೋಡಿಕೊಂಡಿದ್ದಾರೆ .

ನರೇಂದ್ರ ಮೋದಿಯ ಆಡಳಿತದಿಂದ ಅನೇಕ ರಾಷ್ಟ್ರಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಹಲವಾರು ವರ್ಷಗಳಿಂದ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ನಮ್ಮ ದೇಶದ ಮೇಲೆ ಸಾಕಷ್ಟು ಬಾರಿ ದಾಳಿನಡೆಸಿದರೂ ನಮ್ಮ ದೇಶದ ಅಂದಿನ ಪ್ರಧಾನಿಗಳು ಕೈಚಲ್ಲಿ ಕುಳಿತುಕೊಳ್ಳುತ್ತಿದ್ದರು ಇವತ್ತು ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರ ಸರ್ಜಿಕಲ್‌ ಸ್ಟ್ರೈಕ್‌ನಿಂದ ಪ್ರಪಂಚವೇ ತಿರುಗಿ ನೋಡುವ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದರು.

ನರೇಂದ್ರ ಮೋದಿ ಬಂದ ನಂತರ ಭಾರತದ ಸೈನಿಕರು ಹೆಮ್ಮೆ ಪಡುವಂತಾಗಿದೆ ಜೊತೆಗೆ ದೇಶವು ಬಲಿಷ್ಠವಾಗಿದೆ ಪಾಕಿಸ್ತಾನ ದೇಶವು ಪ್ರತಿ ಹಂತದಲ್ಲೂ ಮತ್ತೊಂದು ದೇಶದ ಮಧ್ಯೆ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ ಕೊರೊನಾ ಸಂದರ್ಭದಲ್ಲಿ ದೇಶದಲ್ಲಿ ಮೋದಿ ನಡೆದುಕೊಂಡ ರೀತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಭಾರತ ಆರ್ಥಿಕತೆ ಬೆಳೆದು ಬಲಿಷ್ಠ ಭಾರತವಾಗಿ ಇವತ್ತು ವಿಶ್ವ ಗುರು ಸ್ಥಾನ ಪಡೆದಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಓಂಶಕ್ತಿ ಫೌಂಡೇಶನ್ ಸದಸ್ಯರಾದ ಪದ್ಮಮ್ಮ, ಪ್ರೇಮಾ, ಶುಭಕರ್,ವಿನೋದ, ಜಯಂತಿ, ಪ್ರವೀಣ, ವಿಜಯಕುಮಾರ್, ಕಾವ್ಯ , ರುಕ್ಮಿಣಿ, ಲಕ್ಷ್ಮೀ, ಮೀನಾ, ಸುಜಾತಮ್ಮ, ರೆಡ್ಡೆಮ್ಮ, ಅಶ್ವಿನಿ ಮುಂತಾದವರು ಇದ್ದರು

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!