PLACE YOUR AD HERE AT LOWEST PRICE
ಕೆಜಿಎಫ್:ಇತ್ತೀಚಿಗೆ ಸುರಿಯುತ್ತಿರುವ ಅಲಿಕಲ್ಲು ಮಳೆಗೆ ಕೆಜಿಎಫ್ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿದೆ. ಇದಕ್ಕೆ ಸರಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಹಸಿರು ಸೇನೆಯ ಜಿಲ್ಲಾ ಸಂಚಾಲಕ ಹುಲ್ಕೂರು ಹರೀಕುಮಾರ್ ಆಗ್ರಹಿಸಿದರು.
ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಲಿಕಲ್ಲು ಮಳೆ ಹಾಗೂ ಗಾಳಿಗೆ ರೈತರು ಬೆಳೆದಿರುವ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ಕೈಗೆ ಬಂದ ಕುತ್ತು ಬಾಯಿಗೆ ಬಾರದಂತೆ ರೈತರ ಪರಿಸ್ಥಿತಿ ಆಗಿದೆ.
ಅನೇಕ ವರ್ಷಗಳಿಂದ ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟದಲ್ಲಿ ಸಿಲುಕಿದ ರೈತರಿಗೆ ಮಳೆರಾಯನಿಂದಾಗಿ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ, ಟಮೋಟೊ, ಕೋಸು, ಜೋಳ, ರಾಗಿ ಸೇರಿದಂತೆ ಬಹುತೇಕ ತರಕಾರಿ ಬೆಳೆಗಳು ನಶವಾಗಿರುವುದಾಗಿ ತಿಳಿಸಿದರು.
ವರ್ಷ ಪೂರ್ತಿ ಕುಟುಂಬ ಸಮೇತರಾಗಿ ಮಾವಿನ ಬೆಳೆಗೆ ದುಡಿದು ಮಾವಿನ ಕಾಯಿ ಬಂದಿರುವ ಸಮಯದಲ್ಲಿ ಅಲಿಕಲ್ಲು ಮಳೆಯಿಂದ ಸಂಪೂರ್ಣವಾಗಿ ಕಾಯಿಗಳು ಉದುರಿ ಕೆಳಗೆ ಬಿದ್ದಿರುವುದರಿಂದ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆಯ ಮೂಲಕ ರೈತರ ತೋಟಗಳನ್ನು ಸಮೀಕ್ಷೆ ನಡೆಸಿ ಶೀಘ್ರವಾಗಿ ರೈತರಿಗೆ ಪರಿಹಾರ ದೊರಕಿಸುವ ಮೂಲಕ ರೈತರಿಗೆ ಪ್ರೋತ್ಸಹ ನೀಡಬೇಕೆಂದು ಒತ್ತಾಯಿಸಿದರು.