PLACE YOUR AD HERE AT LOWEST PRICE
ಕೆಜಿಎಫ್:2023ರ ಚುನಾವಣೆಗೆ ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಹಾಗೂ ಸಮಾಜ ಸೇವಕ ಬಿ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಸುರೆಶ್ ರವರು ಕೆಜಿಎಫ್ ವಿಧಾನ ಸಭಾ ಕ್ಷೇತ್ರದಲ್ಲಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಟಿಕೇಟ್ ಆಕಾಕ್ಷಿಯಾಗಿದ್ದರು.
ಬಿಜೆಪಿ ಪಕ್ಷ ಸ್ವಕ್ಷೇತ್ರದವರನ್ನು ಗುರುತಿಸಿ ಟಿಕೆಟ್ ನೀಡಿಲ್ಲ. ಆದ್ದರಿಂದ ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ, ಕ್ಷೇತ್ರದ ಜನತೆ ಯಾವುದೇ ತೀರ್ಪು ನೀಡಿದರು ಸ್ವೀಕರಿಸುತ್ತೇನೆಂದು ಬಿ.ಸುರೇಶ್ ಹೇಳಿದರು.
ಬಿಜೆಪಿ ಪಕ್ಷದ ಹಲವು ಜಿಲ್ಲಾ ಮಟ್ಟದ ನಾಯಕರು ಬಿಜೆಪಿ ಟಿಕೆಟ್ ಕೋಡಿಸುವುದಾಗಿ ನಂಬಿಸಿ ಮೋಸ ಮಾಡಿರುವುದು ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ನೋವು ತೋಡಿಕೊಂಡರು.
ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರಿಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದ ಯಾವ ನಾಯಕರು ಏನೇ ಹೇಳಿದರು ಸಹ ನಾಮಪತ್ರ ವಾಪಸ್ಸು ಪಡೆಯುವ ಮಾತೆಇಲ್ಲ ಎಂದರು.
ತಾಲ್ಲೂಕಿನಲ್ಲಿಯೇ ಕಮ್ಮಸಂದ್ರ ಗ್ರಾಪಂಯನ್ನು ಮಾದರಿ ಗ್ರಾಪಂಯನ್ನಾಗಿ ಅಭಿವೃದ್ಧಿ ಮಾಡಿರುವುದನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇನೆ, ಕ್ಷೇತ್ರದ ಜನತೆ ಒಂದು ಅವಕಾಶ ಕಲ್ಪಿಸಿದ್ದಾರೆ,
ರಾಜ್ಯದಲ್ಲಿ ಚಿನ್ನದ ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವಾರೆಡ್ಡಿ, ಸುಬ್ಬಣ್ಣ, ಗಣೇಶ್, ಶಂಕರ್, ಸಂಪಂಗಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.