PLACE YOUR AD HERE AT LOWEST PRICE
ಬಾಯರ್ಸ್ ಸೆಮೀಸ್ ನಾಟಿ ಟೊಮೋಟೋ ೮೩೨೩ ಎಂಬ ತಳಿಯ ಕ್ಷೇತ್ರೋತ್ಸವವನ್ನು ಕೋಲಾರ ತಾಲೂಕಿನ ರಾಜಕಲ್ಲಹಳ್ಳಿ ಗ್ರಾಮದ ರೈತ ಪಾರ್ಥಸಾರಥಿ ಅವರ ಟೊಮೋಟೋ ತೋಟದಲ್ಲಿ ಹಮ್ಮಿಕೊಂಡು ಪ್ರಾತ್ಯಕ್ಷತೆ ಮೂಲಕ ರೈತರಿಗೆ ಅರಿವು ಮೂಡಿಸಲಾಯಿತು.
ಇಂತಹ ವಾತಾವರಣದಲ್ಲೂ ಈ ತಳಿಯು ಉತ್ತಮ ಇಳುವರಿ, ಒಳ್ಳೆಯ ದೃಢತೆ ಹಾಗೂ ಗುಣಮಟ್ಟದಿಂದ ಕೂಡಿರುವುದನ್ನು ಕಂಡು ರೈತರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಸಂತಸಪಟ್ಟರು. ಈ ತಳಿಯು ಬಂದಿದ್ದ ರೈತರನ್ನು ಆಕರ್ಷಿಸುವಂತೆ ಕಂಗೊಳಿಸುತ್ತಿತ್ತು.
ಕಾರ್ಯಕ್ರಮದಲ್ಲಿ ಬಾಯರ್ಸ್ ಸೆಮೀಸ್ ಪ್ರಾದೇಶಿಕ ವ್ಯವಸ್ಥಾಪಕ ಸೋಮನಾಥ್, ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ರಾಜೀವ್ ಕೊಪ್ಪಾರ್, ವಿಭಾಗೀಯ ವ್ಯವಸ್ಥಾಪಕ ಸುನೀಲ್ಕುಮಾರ್, ಕೇಶವಾನಂದ ಹಾಗೂ ರೈತರು ಉಪಸ್ಥಿತರಿದ್ದರು.