PLACE YOUR AD HERE AT LOWEST PRICE
ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ವಿಚಾರವಾಗಿ ಶಾಸಕ ತನ್ವೀರ್ ಸೇಠ್ ಪತ್ರ ವಿಚಾರ ಅವರ ವೈಯಕ್ತಿಕ ಅಭಿಪ್ರಾಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೋಲಾರದ ಜಿಲ್ಲಾ ಆರೋಗ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಾಯಕರಿಗೆ ತೊಂದರೆ ಆಗಿದೆಯೇನೊ ನೋಡಬೇಕಾಗ್ತಿದೆ, ಶಾಸಕರು ಪತ್ರ ಬರೆದಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಿದೆ. ಆ ಬಗ್ಗೆ ಗೃಹ ಸಚಿವರು ಪರಿಶೀಲನೆ ಮಾಡ್ತಾರೆ ಎಂದರು.
ಇದೇ ವೇಳೆ ಕೆಲವು ಶಾಸಕರು ಸಚಿವರ ವಿರುದ್ದ ಸಿಎಂಗೆ ಪತ್ರ ಬರೆದಿರೊ ವಿಚಾರ ಸುಳ್ಳು ಆಧಾರ ರಹಿತ ಚರ್ಚೆ ನೆನ್ನೆ ಇಡೀ ದಿನ ನಡೆದಿದೆ. ಈ ಸುದ್ದಿಯನ್ನು ನಿಜವೊ, ಸುಳ್ಳೋ ಎಂಬುದನ್ನು ಮೊದಲು ಪರಿಶೀಲನೆ ನಡೆಸಬೇಕು.
ಬಿಕೆ ಹರಿಪ್ರಸಾದ್ ಅವರ ಹೇಳಿಕೆ ಕುರಿತು ಈಗಾಗಲೇ ನಮ್ಮ ಹಿರಿಯ ನಾಯಕರು ಹೇಳಿಕೆ ನೀಡಿದ್ದಾರೆ, ಅದು ಮುಗಿದ ವಿಚಾರ ಶಾಸಕಾಂಗ ಪಕ್ಷದ ಸಭೆಗು, ಅಸಮಾಧಾನಕ್ಕು ಸಂಬoದವೇ ಇಲ್ಲ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಒಳ್ಳೆಯ ಬೆಳವಣಿಗೆ ಕಾಂಗ್ರೆಸ್ ಪಕ್ಷದಲ್ಲಿ ಮುಕ್ತವಾದ ಚರ್ಚೆಗೆ ಅವಕಾಶ ಇದೆ ಎಂದರು.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ವಿಚಾರ ಸಿಎಂ ಬದಲಾವಣೆ ವಿಚಾರ ಸಂಪೂರ್ಣ ಅಪ್ರಸ್ತುತ ಹಿಂದೆ ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ ಎಂದು ಮಾಧ್ಯಮಗಳು ಹೇಳಿದ್ದವು ಇದೀಗ ಅಸಮಾಧಾನ ಎಂದು ಸುದ್ದಿಯನ್ನ ಮಾಡ್ತಿದ್ದೀರಾ ರಾಜ್ಯದ ಅಭಿವೃದ್ಧಿ ಪರ ಕಾಂಗ್ರೆಸ್ ಸರ್ಕಾರದ ಆಡಳಿತ ಇರಲಿದೆ ಎಂದರು.
ಅಸಮಾಧಾನ ಸಹಜ, ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯ ನಮ್ಮ ನಾಯಕರಿಗಿದೆ ಸರ್ಕಾರ ಉರುಳಿಸೊ ತಂತ್ರ ನಡೀತಿದೆ ಎನ್ನುವ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ಅಂತಹ ಯಾವುದು ಪ್ರಯತ್ನಕ್ಕು ಯಶಸ್ಸು ಸಿಗೋದಿಲ್ಲ ಸರ್ಕಾರ ಬೀಳಿಸೊಕೆ ಅಂತಲೇ ಆಸಕ್ತಿ ಇರೋರು ಇದ್ದಾರೆ.