• Thu. May 9th, 2024

PLACE YOUR AD HERE AT LOWEST PRICE

ಕೋಲಾರ.ಡಿ.೨೫ : ನೆಲ ಸಂಸ್ಕೃತಿಯ ಜಾಡು ಹಿಡಿದು ಮರೆತ ದಾರಿಗಳ ಹುಡಕಾಟದ ಪಯಣದ ೨೦೦ನೇ ಹುಣ್ಣಿಮೆ ಹಾಡು ಸಾಂಸ್ಕೃತಿಕ ಯಾನಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಸೋಮವಾರ ಇಲ್ಲಿನ ಶತಶೃಂಗ ಪರ್ವತಗಳ ಸಾಲಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ, ಡಿ.೨೫ರಿಂದ ಮೂರು ದಿನಗಳ ಕಾಲ ನಡೆಯುವ ಆದಿಮ ಸಾಂಸ್ಕೃತಿಕ ಯಾನ-೨೦೦ಕ್ಕೆ ಅಧಿಕೃತವಾಗಿ ಗಣ್ಯರೊಂದಿಗೆ ತಂಬೂರಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಆದಿಮ ಸಂಸ್ಥೆಯಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಪ್ರತಿ ತಿಂಗಳ ಹುಣ್ಣಿಮೆಯಂದು ಹುಣ್ಣಿಮೆ ಹಾಡು ಕಾರ್ಯಕ್ರಮದಡಿಯಲ್ಲಿ ವಿವಿಧ ಜಾನಪದ, ಕಾದಂಬರಿ, ರಂಗಭೂಮಿ ಆಧಾರಿತ ನಾಟಕಗಳು ಹಾಗೂ ಕಲಾ ಪ್ರಕಾರಗಳು ಪ್ರದರ್ಶನ ಮಾಡುವ ಮೂಲಕ, ರಂಗಭೂಮಿ, ನಾಟಕ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳುತ್ತಾ ಬರಲಾಗಿದೆ. ನೂರಾರು ಕಲಾವಿದರನ್ನು ಸಮಾಜಕ್ಕೆ ಪರಿಚಯಿಸಿದೆ. ಸದ್ಯ ನಮ್ಮ ಸಂಸ್ಕೃತಿಯನ್ನ ಉಳಿಸಿ ಬೆಳೆಸುವಲ್ಲಿ ಆದಿಮ ರಾಜ್ಯ ಹಾಗೂ ದೇಶದ ಗಮನ ಸೆಳೆದಿದೆ ಎಂದು ಶ್ಲಾಘಿಸಿದರು.

ರಾಜ್ಯದ ಇತಿಹಾಸದ ಪುಟಗಳಿಗೆ ಕೋಲಾರ ತನ್ನದೇ ಕೊಡುಗೆಯನ್ನು ನೀಡಿದೆ. ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ. ಮೊದಲಾದವರನ್ನು ರಾಜ್ಯಕ್ಕೆ ನೀಡಿದೆ. ಇದೀಗ ಆದಿಮ ಸಾಂಸ್ಕೃತಿಕ ವಿಶೇಷವಾಗಿ ಆ ಸಾಲಿಗೆ ಸೇರುತ್ತಿದೆ, ಇದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕೊಂಡಾಡಿದರು.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಭಾರತದ ಪ್ರಮುಖ ಜಾನಪದ ಕಲೆಗಳನ್ನ ಇಲ್ಲಿ ಕಲಿಸಲಾಗುತ್ತಿದೆ. ನಮ್ಮ ಪೂರ್ವಿಕರು ಕಟ್ಟಿ ಬೆಳೆಸಿದ ಹಿಂದಿನ ಸಂಸ್ಕೃತಿಯನ್ನ ಉಳಿಸಿ ಬೆಳೆಸುವಲ್ಲಿ ಆದಿಮ ಸಾಕಷ್ಟು ಶ್ರಮ ವಹಿಸಿದೆ. ಆದಿಮದಂತೆ ಕೆಲಸ ನಿರ್ವಸುತ್ತಿರುವ ಮತ್ತೊಂದು ಪರ್ಯಾಯ ಕೇಂದ್ರ ದೇಶದಲ್ಲಿ ಎಲ್ಲೂ ನೋಡಲು ಸಾಧ್ಯವಿಲ್ಲ. ಈ ರೀತಿಯಾಗಿ ಆರೋಗ್ಯಕರ ಸಮಾಜಕ್ಕೆ ಅಗತ್ಯವಾದ ಕಲೆ ಮತ್ತು ಸಂಸ್ಕೃತಿಯನ್ನು ಕಲಿಸುತ್ತಿರುವ ಆದಿಮದಂತ ಕೇಂದ್ರಗಳ ಕೋಲಾರಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶಕ್ಕೇ ಅಗತ್ಯವಾಗಿದೆ ಎಂದರು.

ಇದೇ ವೇಳೆ ಎಂಎಲ್‌ಸಿ ಅನಿಲ್ ಕುಮಾರ್ ಮಾತನಾಡಿ, ಆದಿಮ ಸಾಂಸ್ಕೃತಿಕ ಕೇಂದ್ರ ನಮ್ಮ ಪೂರ್ವಿಕರನ್ನೂ, ನಾವು ಮರೆತು ಹೋದವುಗಳನ್ನು ನೆನಪಿಸುತ್ತದೆ. ನಮ್ಮ ಭವಿಷ್ಯದ ಪೀಳಿಗೆಗೆ ಶಿಸ್ತು ಮತ್ತು ಸನ್ನಡತೆಯನ್ನು ಕಲಿಸುವ ಈ ರೀತಿಯ ಕೇಂದ್ರಗಳು ಇನ್ನಷ್ಟು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಮಾದ್ಯಮ ಕಾರ್ಯದರ್ಶಿ ಪ್ರಭಾಕರ್, ಆದಿಮ ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಕೊಮ್ಮಣ್ಣ, ಸಂವಾದ ಪತ್ರಿಕೆ ಸಂಪಾದ ಇಂದೂಧರ ಹೊನ್ನಾಪುರ, ಸಾಹಿತಿ ಪದ್ಮಾಲಯ ನಾಗರಾಜ್, ರಂಗ ನಿರ್ದೇಶಕ ರಾಮಕೃಷ್ಣ ಬೆಳ್ತೂರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!