PLACE YOUR AD HERE AT LOWEST PRICE
ಕೋಲಾರ : ತಾಲೂಕಿನ ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ಇದೆ ಭಾನುವಾರ 7 ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮಕ್ಕೆ ಸಿನಿ ಜನಪ್ರಿಯ ನಟರಾದ ದ್ರುವ ಸರ್ಜಾ, ನೆನಪಿರಲಿ ಪ್ರೇಮ್ ಮತ್ತು ಇತರೆ ಕಾಮಿಡಿ ಕಲಾವಿದರು ಆಗಮಿಸಲಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪಕ್ಷಬೇದವಿಲ್ಲ. ಎಲ್ಲಾ ಪಕ್ಷದ ಮುಖಂಡರು ಆಗಮಿಸಿ ಕನ್ನಡ ಉಳಿಸಿ ಕನ್ನಡ ಬೆಳಸಿ ಎನ್ನುವ ಮೂಲಕ ಅದ್ದೂರಿಯಾಗಿ ಕನ್ನಡದ ಹಬ್ಬ ಆಚರಣೆ ಮಾಡಲಿದ್ದೇವೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ ಎಸ್ ವೆಂಕಟೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕನ್ನಡದ ಹಬ್ಬ ನಮ್ಮೆಲ್ಲರ ಹಬ್ಬ. ಕನ್ನಡ ಉಳಿಸುವ ಸಲುವಾಗಿ ನಾವು ಯಾವುದೇ ತ್ಯಾಗಕ್ಕಾದರೂ ಸಿದ್ದ. ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ಸತತವಾಗಿ 6 ವರ್ಷಗಳಿಂದ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ಅದೇ ರೀತಿ ಈ ವರ್ಷವೂ ಅದ್ದೂರಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಆಚರಣೆಗೆ ಸಮಿತಿಯು ಸಹ ಸಿದ್ದವಾಗಿದೆ.
ಭಾನುವಾರ ಬೆಳಿಗ್ಗೆ 9 ಕ್ಕೆ ಬಸ್ಟ್ಯಾಂಡ್ ನಲ್ಲಿ ದ್ವಜಾರೋಹಣ, 9:30 ಕ್ಕೆ ಭುವನೇಶ್ವರಿ ದೇವಿಗೆ ಪಲ್ಲಕ್ಕಿ ಪೂಜೆ ಮತ್ತು ಪ್ರಸಾದ ವಿನಿಯೋಗ, 10 ಕ್ಕೆ ಆಟೋ ನಿಲ್ದಾಣದಲ್ಲಿ ಬಹಳ ಅಂದವಾಗಿ ಅಲಂಕಾರಗೊಂಡ ಆಟೋಗಳಿಗೆ ವಿಶೇಷ ಪೂಜೆ ಮತ್ತು ವಿವಿಧ ಕಲಾ ತಂಡಗಳಿಂದ ಮೆರವಣಿಗೆಗೆ ಮುಖ್ಯ ಅತಿಥಿಗಳಿಂದ ಚಾಲನೆ, ಬೀದಿ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಸಂಜೆ 6 ಘಂಟೆಗೆ ಸಿನಿ ತಾರೆಯರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಗರ ಮತ್ತು ತಾಲೂಕಿನ ಹಳ್ಳಿ ಭಾಗದ ಜನರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಮೇಡಿಹಾಳ ಮುನಿ ಆಂಜಿ ಪ್ರಕಾಶ್, ಎಸ್ ಮಂಜುನಾಥ್, ಬಿ ಎಂ ಕೃಷ್ಣ, ಮಲ್ಲಿಕಾರ್ಜುನ, ಓಹೀಲೇಶ್, ನಾಗನಾಳ ಶಂಕರ್, ವೆಂಕಟೇಶ್, ರವಿಚಂದ್ರ, ಸೇರಿದಂತೆ ಇತರರು ಇದ್ದರು.