ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರ:ಸಂಜೆ ಸಮಾಚಾರ ದಿನಪತ್ರಿಕೆಯ ಜಿಲ್ಲಾ ವರದಿಗಾರ ಸುರೇಶ್ ನಾಯ್ಡು(48) ಇಂದು ಸಂಜೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸುರೆಶ್ ನಾಯ್ಡು ಕಳೆದ ಹಲವಾರು ವರ್ಷಗಳಿಂದ ಪತ್ರಿಕಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಸಂಜೆ ಸಮಾಚಾರ ದಿನ ಪತ್ರಿಕೆಯಲ್ಲಿ ಕಳೆದ 5 ವರ್ಷಗಳಿಂದ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು.
ಸುರೇಶ್ ನಾಯ್ಡು ಬಂಗಾರಪೇಟೆ ಪಟ್ಟಣದ ಶಾಂತಿ ನಗರದ ತಮ್ಮ ನಿವಾಸದಲ್ಲಿ ಇಂದು ಮದ್ಯಾಹ್ನ ಊಟ ಮಾಡಿ ಮಲಗಿದ ಕೆಲ ಸಮಯದ ನಂತರ ಎದೆ ನೋವು ಕಾಣಿಸಿಕೊಂಡಿದೆ.
ಬಳಿಕ ಆಸ್ಪತ್ರೆಗೆ ಕರೆದೋಯ್ದ ಕುಟುಂಬ ಸದಸ್ಯರಿಗೆ ಹಾರ್ಟ್ ಅಟ್ಯಾಕ್ ಆಗಿರುವ ಮಾಹಿತಿಯನ್ನಿ ವೈದ್ಯರು ನೀಡಿದ್ದಾರೆ. ಸುರೇಶ್ ನಾಯ್ಡು ನಿನ್ನೆಯಷ್ಟೆ ಶಿರಡಿ ಸಾಯಿ ಬಾಬಾ ದರ್ಶನ ಪಡೆದು ವಾಪಸ್ ಆಗಿದ್ದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬಂಗಾರಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಂಖಡರು ಸುರೇಶ್ ನಾಯ್ಡುರಿಗೆ ಸಂತಾಪ ಸೂಚಿಸಿದ್ದಾರೆ.