PLACE YOUR AD HERE AT LOWEST PRICE
ಬಂಗಾರಪೇಟೆ ಪಟ್ಟಣದ ತಾಲೂಕು ಆಡಳಿತ ಕಚೇರಿಯ ಮೊದಲನೇ ಮಹಡಿಗೆ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು ಆತ್ಮವಿಶ್ವಾಸ ವೇದಿಕೆ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಸಿದ ಸಂಘಟನೆಯ ಮುಖಂಡ ಎಂ.ಎನ್.ಭಾರದ್ವಾಜ್ ಮಾತನಾಡಿ, ಪ್ರತಿದಿನ ತಾಲೂಕು ಕಚೇರಿಗೆ ಸಾರ್ವಜನಿಕರು ಸಾವಿರಗಟ್ಟಲೆ ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುವುದು ವಾಡಿಕೆಯಾಗಿದೆ.
ಸರ್ಕಾರಿ ಸೌಲಭ್ಯ ಪಡೆಯಲು ಈ ತಾಲೂಕು ಕಚೇರಿಗೆ ಹೆಚ್ಚಾಗಿ ವೃದ್ಧರು, ಮಹಿಳೆಯರು, ಮಕ್ಕಳು, ಅಂಗವಿಕಲರು ಬರುತ್ತಾರೆ. ಆದರೆ ತಾಲೂಕು ಕಚೇರಿ ಮೊದಲ ಮಹಡಿಗೆ ಹೋಗಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ.
ತಾಲೂಕು ಆಡಳಿತ ಕಚೇರಿಯ ಮೊದಲ ಮಹಡಿಯಲ್ಲಿ ಆಹಾರ ಇಲಾಖೆ ಭೂ ಮಾಪನ ಇಲಾಖೆ, ಟ್ರಜರಿ, ಹಕ್ಕು ದಾಖಲೆ ವಿಭಾಗ ಇದೆ. ಎರಡನೆ ಮಹಡಿಯಲ್ಲಿ ಚುನಾವಣಾ ಶಾಖೆ, ಸರ್ವೆ ಇಲಾಖೆ ಇನ್ನೂ ಕೆಲ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.
ಅನೇಕರಿಗೆ ಮೆಟ್ಟಿಲು ಮೂಲಕ ಹತ್ತಲು ಮತ್ತು ಇಳಿಯಲು ಕಷ್ಟವಾಗುತ್ತಿದೆ. ಆದರಿಂದ ಸಂಬಂಧಪಟ್ಟ ಅಧಿಕಾರಿಗಳಾಗಳು, ಈ ಕೂಡಲೇ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಶಿರಸ್ತೇದಾರ್ ಚಂದ್ರಶೇಖರ್ ಮನವಿಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆತ್ಮವಿಶ್ವಾಸ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಭಾವರಹಳ್ಳಿ ಮುನಿಯಪ್ಪ, ಮುಖಂಡರಾದ ರಾಮಚಂದ್ರಪ್ಪ, ನಾರಾಯಣಸ್ವಾಮಿ, ನಾರಾಯಣಪ್ಪ ಮೊದಲಾದವರಿದ್ದರು.