• Sat. May 18th, 2024

PLACE YOUR AD HERE AT LOWEST PRICE

ಶ್ರೀನಿವಾಸಪುರ:ತಾಲ್ಲೂಕಿನ ಬಂಗವಾದಿ ಸರ್ಕಾರಿ ಶಾಲೆಗೆ ಕಾಯ್ದಿರಿಸಿರುವ ಜಾಗವನ್ನು ಒತ್ತುವರಿ ತೆರವುಗೊಳಿಸಿ ಆ ಜಮೀನನ್ನು ರಕ್ಷಿಸಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಬಂಗವಾದಿ ನಾರಾಯಣಪ್ಪ ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದ್ದಾರೆ.

ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದು, ಮನವಿಯಲ್ಲಿ ಕಳೆದ ಐದು ಹತ್ತು ವರ್ಷಗಳಿಂದ ಸದರಿ ಶಾಲಾಕಟ್ಟಡ ಸರ್ವೇ ನಂಬರ್ ನಲ್ಲಿ ಇದೆ ಎಂದು ಆ ಭೂಮಿಯ ವಾರಸುದಾರರು ಶಾಲೆಗೆ ಸರ್ಕಾರದಿಂದ ಮಂಜೂರಾದ ಎರಡು ಎಕರೆ ಆಟದ ಮೈದಾನ ಭೂಮಿಯನ್ನು ಸುಮಾರು ಹದಿನಾರು ಗುಂಟೆ ಒತ್ತುವರಿ ಮಾಡಿಕೊಂಡಿದ್ದಾರೆ.

ಈಗ ಶಾಲಾ ಕಟ್ಟಡಗಳು ಶಿಥಿಲಗೊಂಡು ಶಾಲಾ ಚಟುವಟಿಕೆಗಳು ನಡೆಸಲು ಮೈದಾನವಿಲ್ಲದೆ ಕಟ್ಟಡವಿಲ್ಲದೆ ಶಾಲಾ ವಾತಾವರಣ ಇಲ್ಲದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪಾಠ ಪ್ರವಚನಗಳು ನಡೆಯುತ್ತಿದ್ದು,  ಬಹುತೇಕ ಮಕ್ಕಳು ಕೂಲಿ ನಾಲಿ ಮಾಡುವ ಅಸ್ಪೃಶ್ಯ ಜಾತಿಯ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

ಇತ್ತ ಶಾಲಾ ಕಟ್ಟಡಗಳು ಮತ್ತು ಶಾಲಾ ಆಟದ ಮೈದಾನ ಭೂಮಿ ಒತ್ತುವರಿದಾರರಿಂದ ಆವರಿಸಿ ದಲಿತ ಮಕ್ಕಳಿಗೆ ಸೇರಿದಂತೆ ಎಲ್ಲಾ ಸಮುದಾಯದ ಮಕ್ಕಳಿಗೆ ಶಾಲಾ ಶಿಕ್ಷಣ ಸಿಗದೆ ಅನ್ಯಾಯವಾಗಿದೆ. ಆದುದರಿಂದ ದಯವಿಟ್ಟು ಕೂಡಲೆ ಜಿಲ್ಲಾಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಮನವಿ ಮಾಡಿದ್ದಾರೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!