• Sun. May 19th, 2024

PLACE YOUR AD HERE AT LOWEST PRICE

ಮಾಲೂರಿನ ಕ್ರೈಸ್ಟ್ ಕಾಲೇಜ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

ಪರಿಸರ ದಿನಾಚರಣೆ ಜಾಗೃತಿ ಅಂಗವಾಗಿ ಪ್ಲಾಸ್ಟಿಕ್ ನಿರ್ಮೂಲನೆ ಕುರಿತು ಮಾಲೂರಿನ ಆಲಂಬಾಡಿ ಗೇಟ್‌ನ ಕ್ರೈಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆ ರೂಪಿಸಿದ ೨೭೧ ಭಾಷೆಗಳ ಘೋಷಣೆಯ ವಾಕ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಾಣ ಮಾಡಿದೆ.

ಕಾಲೇಜಿನ ಸಭಾಂಗಣದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪದಕ ಹಾಗೂ ಪ್ರಶಸ್ತಿ ಪತ್ರ ಪ್ರದರ್ಶಿಸಿ ಮಾತನಾಡಿದ ಪ್ರಿನ್ಸಿಪಾಲ್ ರೆವರೆಂಡ್‌ಫಾದರ್ ಜೀನ್ಸ್ಜಾರ್ಜ್, ಪರಿಸರ ದಿನಾಚರಣೆ ಅಂಗವಾಗಿ ಕಾಲೇಜಿನ ೨೭೧ ವಿದ್ಯಾರ್ಥಿಗಳು ದೇಶದ ೨೭೧ ಭಾಷೆಯಲ್ಲಿ ಪರಿಸರ ಉಳಿಸುವ ಬಗ್ಗೆ ಘೋಷ ವಾಕ್ಯಗಳನ್ನು ರಚಿಸಿದ್ದು ದಾಖಲೆಯಾಗಿದೆ ಎಂದರು. ದೇಶದಲ್ಲೇ ಪ್ರಥಮ ಹಾಗೂ ವಿಶೇಷ ಪ್ರಯತ್ನ ಇದಾಗಿದ್ದು ಹೀಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

ಇದು ಇಡೀ ಕಾಲೇಜಿನ ವಿದ್ಯಾರ್ಥಿ, ಉಪನ್ಯಾಸಕರು ಹಾಗೂ ಪ್ರಿನ್ಸಿಪಾಲ್ ಸಾಧನೆಯಾಗಿದ್ದು ರಾಜ್ಯಕ್ಕೆ ಹೆಮ್ಮೆಯಾಗಿದೆ. ಇದೀಗ ಜಾಗತಿಕ ತಾಪಮಾನ ತುಂಬಾ ಏರಿಕೆಯಾಗಿದ್ದು ಹೀಗಾಗಿ ಪರಿಸರ ಸಮತೋಲನಕ್ಕಾಗಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಬೇಕಾಗಿದೆ. ಪರಿಸರ ಮಲೀನವಾಗಿ ಶುದ್ಧಗಾಳಿ ದೊರೆಯದಂತಾಗಿ ಕೋವಿಡ್‌ನಲ್ಲಿ ಉಸಿರಾಟದ ತೊಂದರೆಯಿoದ ಪ್ರಾಣವನ್ನು ಉಳಿಸಿಕೊಳ್ಳಲು ಆಕ್ಸಿಜನ್‌ಗಾಗಿ ಲಕ್ಷಾಂತರ ರೂ. ಖರ್ಚು ಮಾಡಿದರೂ ಹಲವರು ಪ್ರಾಣ ಬಿಟ್ಟರು. ಮುಂದೆ ಇಂತಹ ಅವಘಢಗಳು ಸಂಭವಿಸದ ಹಾಗೆ ಉತ್ತಮವಾದ ಪರಿಸರವನ್ನು ಉಳಿಸಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಿನ್ಸಿಪಾಲ್ ರೆವರೆಂಡ್‌ಫಾದರ್ ಜೀನ್ಸ್ಜಾರ್ಜ್ ಮಾಹಿತಿ ನೀಡಿದರು.

ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರತಿನಿಧಿ ಆರ್.ಹರೀಶ್ , ಕಾಲೇಜಿನ ಉಪ ಪ್ರಾಂಶುಪಾಲ ರೆವರೆಂಡ್ ಫಾದರ್ ಎಬಿನ್ ಫ್ರಾನ್ಸಿಸ್, ಕ್ರೈಸ್ಟ್ ಇಂಟರ್ ನ್ಯಾಷನಲ್ ಶಾಲೆ ಪ್ರಿನ್ಸಿಪಾಲ್ ಫಾದರ್ ರೋನರ್ಸ್, ವಾಣಿಜ್ಯ ವಿಭಾಗದ ಎಚ್‌ಒಡಿ ಶಿವಗಾಮಿ, ಪ್ರಾಧ್ಯಾಪಕರಾದ ಜೋಸ್ ಪ್ರಾನ್ಸಿಸ್, ಜೋಸ್ನಾ ಕುರಿಯಾಕೋಸ್ ಆಡಳಿತ ಅಧಿಕಾರಿ ರಿಚರ್ಡ್ ಸ್ಟಾಲಿನ್ ಪಾಲ್ ಇದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!