• Tue. May 21st, 2024

PLACE YOUR AD HERE AT LOWEST PRICE

ಕೆಜಿಎಫ್:ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದಲ್ಲಿನ ನಕಾಶೆ ರಸ್ತೆಗಳನ್ನು ಕಂದಾಯ ಇಲಾಖೆಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಒತ್ತುವರಿದಾರರಿಂದ ತೆರುವು ಗೊಳಿಸಲಾಯಿತು.

ತಾಲ್ಲೂಕಿನ ಕಳ್ಳಿಕುಪ್ಪ ಗ್ರಾಮದ ಹಳೆಯ ನಕಾಶೆ ರಸ್ತೆಗಳು ಒತ್ತುವರಿಯಾದ ಹಿನ್ನಲೆ ರೈತರು ತಮ್ಮ ತೋಟಗಳಿಗೆ ಹಾಗೂ ತೋಟಗಳಲ್ಲಿನ ಮನೆಗಳಿಗೆ ತೆರಳಲು ರಸ್ತೆ ಇಲ್ಲದೆ ಪರದಾಟ ನಡೆಸುತ್ತಿದ್ದರು. ಗ್ರಾಮದ ಹಲವು ಮುಖಂಡರು ಕಂದಾಯ ಇಲಾಖೆಗೆ ಹಾಗೂ ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ ಪ್ರಯುಕ್ತ ನಕಾಶೆ ರಸ್ತೆಗಳನ್ನು ಗುರುತಿಸಲಾಯಿತು.

ಕೆಜಿಎಫ್ ತಹಸೀಲ್ಧಾರ್ ಆದೇಶದ ಮೆರೆಗೆ ಕಂದಾಯ ಇಲಾಖೆಯ ಅಧಿಕಾರಿ ಮುನಿವೆಂಕಟಸ್ವಾಮಿ ಹಾಗೂ ಸರ್ವೇ ಇಲಾಖೆಯ ಅಧಿಕಾರಿ ಮೌಲಖಾನ್ ನೇತೃತ್ವದಲ್ಲಿ ನಕಾಶೆ ರಸ್ತೆಗಳನ್ನು ಸರ್ವೇ ಮಾಡಿ ಗುರುತಿಸಿ ಒತ್ತುವರಿದಾರರಿಂದ ತೆರುವು ಗೊಳಿಸಲಾಯಿತು.

ಕಳ್ಳಿಕುಪ್ಪ ಗ್ರಾಮದ ಎಸ್ಸಿ ಸಮುದಾಯಕ್ಕೆ ಸೇರಿದ ಸ್ಮಶಾಣವನ್ನು ಸರ್ವೇ ಮಾಡಲಾಯಿತು. ನಕ್ಕೆ ನಕಾಶೆಯ ರಸ್ತೆಯನ್ನು ಗುರುತಿಸಲು ಸೂಕ್ತ ಆದೇಶ ಇಲ್ಲದ ಕಾರಣ ನಕಾಶೆ ರಸ್ತೆ ಗುರುತಿಸಲು ಉನ್ನತ ಅಧಿಕಾರಿಗಳಿಂದ ಆದೇಶ ತಂದು ನಕಾಶೆ ರಸ್ತೆಯನ್ನು ಗುರುತಿಸುವುದಾಗಿ ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳ ಸರ್ವೇ ಕಾರ್ಯಕ್ಕೆ ಬೇತಮಂಗಲ ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಏರ್ಪಡಿಸಲಾಗಿತ್ತು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!