• Fri. Oct 18th, 2024

ಜನನಿಬಿಡ ನಡು ರಸ್ತೆಯಲ್ಲೇ ಯುಜಿಡಿ ಓಪನ್ ರಸ್ತೆಯಲ್ಲಿ ಕೊಳಕು ನೀರು-ಸಂಕಷ್ಟದಲ್ಲಿ ಜನತೆ

PLACE YOUR AD HERE AT LOWEST PRICE

ಸುಮಾರು ಮೂರು ತಿಂಗಳಿಂದ ಸಾರ್ವಜನಿಕರು ಓಡಾಡುವ ಜನನಿಬಿಡ ಕೋಲಾರ ಪ್ರಭಾತ್ ಚಿತ್ರಮಂದಿರದ ಪಕ್ಕ ಖಾಸಗಿ ಹೋಟೆಲೊಂದರ ಮುಂಭಾಗ ನಡು ರಸ್ತೆಯಲ್ಲೇ ಯುಜಿಡಿ ಬ್ಲಾಕ್ ಆಗಿ ಕೊಳಕು ನೀರು ರಸ್ತೆಯಲ್ಲಿ ಹರಿಯುತ್ತಿದೆ.

ಇದು ನಗರದ ಪ್ರಮುಖ ರಸ್ತೆಗಳಲ್ಲೊಂದಾಗಿದ್ದು, ಜಿಲ್ಲಾಮಟ್ಟದ ಕಚೇರಿಗಳಿಗೆ ಜನತೆ,ಸಿಬ್ಬಂದಿ, ಪದವಿ ಕಾಲೇಜು, ಜೂನಿಯರ್ ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆಗಳಿಗೆ ಈ ರಸ್ತೆಯಲ್ಲೇ ಮೂಗು ಮುಚ್ಚಿಕೊಂಡು ವಿದ್ಯಾರ್ಥಿಗಳು,ನಾಗರೀಕರು ಓಡಾಡಬೇಕಾದ ದುಸ್ಥಿತಿ ಇದೆ.

ಯುಜಿಡಿಯ ಕೊಳಕು ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ನಿಂತ ನೀರಿನಲ್ಲಿ ವಾಹನಗಳು ಸಂಚರಿಸುವಾಗ ಕೊಳಕು ಪಾದಚಾರಿಗಳ ಮೇಲೆ ಹಾರಿ ತೊಂದರೆಯಾಗುತ್ತಿದೆ. ಈ ಯುಜಿಡಿ ಎದುರಿಗೆ ಹೋಟೆಲ್ ಒಂದಿದೆ, ಜತೆಗೆ ಅಲ್ಲೇ ಕಬ್ಬಿನ ಹಾಲಿನ ಅಂಗಡಿಯೂ ಇದೆ, ಇಷ್ಟೆಲ್ಲಾ ಇದ್ದರೂ, ನಗರಸಭೆಗೆ ಮಾತ್ರ ಈ ಯುಜಿಡಿ ಬ್ಲಾಕ್ ಆಗಿರುವುದು ಕಾಣಿಸಿಯೇ ಇಲ್ಲ.
ಇದೇ ಜಾಗದಲ್ಲೇ ಜೆರಾಕ್ಸ್ ಅಂಗಡಿಗಳು, ಸಬ್ ರಿಜಿಸ್ಟರ್ ಆಫೀಸ್, ಪ್ರಭಾತ್ ಸಿನಿಮಾ ಮಂದಿರ ಇದ್ದು ಜನರು ಪ್ರತಿನಿತ್ಯ ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ.

ಕೂಡಲೇ ನಗರಸಭೆ ಅಥವಾ ಜಿಲ್ಲಾಧಿಕಾರಿಗಳು ಗಮನಹರಿಸಿ, ಈ ಯುಜಿಡಿ ಸಮಸ್ಯೆ ಪರಿಹರಿಸಿ, ನಗರದಲ್ಲಿ ಸಂಚರಿಸುವ ನಾಗರೀಕರು ನೆಮ್ಮದಿಯಿಂದ ಓಡಾಡಲು ಅವಕಾಶ ಕಲ್ಪಿಸಲಿ ಮತ್ತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿರುವ ಈ ಯುಜಿಡಿ ಸರಿಪಡಿಸಲಿ ಎಂದು ಈ ಭಾಗದ ಅಂಗಡಿ ಮಾಲೀಕರು, ಮುಖಂಡರು ಆಗ್ರಹಿಸಿದ್ದಾರೆ.

 

ಇದನ್ನೂ ಓದಿ :  ಮಕ್ಕಳ ಸದೃಡತೆಗೆ ದೈಹಿಕ ಶಿಕ್ಷಣ ಅತ್ಯಗತ್ಯ, ಶಿಕ್ಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು – ಸಂಸದ ಮುನಿಸ್ವಾಮಿ ಕರೆ

Related Post

ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 
ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್
ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ

Leave a Reply

Your email address will not be published. Required fields are marked *

You missed

error: Content is protected !!