• Sun. May 19th, 2024

PLACE YOUR AD HERE AT LOWEST PRICE

ಪಟ್ಟಣದ  ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಕೌಟ್-ಗೈಡ್ ಮಕ್ಕಳ ತಾಲ್ಲೂಕು ಮಟ್ಟದ ಗೀತಾ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಶ್ರೀ ಎನ್ ಎಂ ಶಂಕರಪ್ಪ ಉಪಪ್ರಾಂಶುಪಾಲರು ಮತ್ತು ಸ್ಥಳೀಯ ಸಂಸ್ಥೆ ನೂತನ ಅಧ್ಯಕ್ಷರು ಡ್ರಮ್ಸ್  ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಶಿಸ್ತು ಮೂಡಿಸಲು ಸ್ಕೌಟ್ & ಗೈಡ್ ಸಂಸ್ಥೆ ಸಹಕಾರಿಯಾಗಿದೆ.

ನಾನೂ ಸಹ ವಿದ್ಯಾರ್ಥಿ ದೆಸೆಯಲ್ಲಿ ಎನ್.ಸಿ.ಸಿ. ಯಲ್ಲಿ ಇದ್ದು ಉತ್ತಮ ಸೇವೆ ಸಲ್ಲಿಸಿದ್ದೇನೆ. ಇಂದಿನ ಮಕ್ಕಳಿಗೆ ಶಿಸ್ತು ತಾಯಿ ಬೇರು ಇದ್ದ ಹಾಗೆ ಮಕ್ಕಳು ಮೂಲದಿಂದಲೂ ಶಿಸ್ತನ್ನು ರೂಡಿಸಿಕೊಂಡಾಗ  ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ತಿಳಿಸಿದರು.

ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತರಾದ  ಶ್ರೀಮತಿ ಸುಜಾತ ರವರು ಮಾತನಾಡಿ ಮಕ್ಕಳು ಈ ಸಂಸ್ಥೆಯಲ್ಲಿ ಸೇರಿ ಶಿಸ್ತನ್ನು ಕಲಿಯುವುದರೊಂದಿಗೆ ಉತ್ತಮ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.

*ಈ ಸಂದರ್ಭದಲ್ಲಿ  ಜಿಲ್ಲಾ ತರಬೇತಿ ನಾಯಕ ನಂಜುಂಡಪ್ಪ, ಜಿಲ್ಲಾ ಸಂಘಟಕ   ವಿಶ್ವನಾಥ ವಿ ಕೋಲಾರ, ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಮ್ಮ, ಸಹ ಕಾರ್ಯದರ್ಶಿ ಶ್ರೀ ನಾರಾಯಣಸ್ವಾಮಿ, ಕೋಶಾಧಿಕಾರಿ ರಾಮಚಂದ್ರಪ್ಪ, ಪದಾಧಿಕಾರಿಗಳಾದ ಅಂತೋನಿ ಜಯಕುಮಾರ್, ಶಾಂತಕುಮಾರಿ, ಪವನ್ ಕುಮಾರ್, ನಾರಾಯಣಸ್ವಾಮಿ, ನಂದೀಶ್, ರವಿತೇಜ್,ಅಶೋಕ್,ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. *ಕಬ್ಸ್ ಬುಲ್ ಬುಲ್ಸ್ ಸ್ಕೌಟ್ಸ್ ಗೈಡ್ಸ್ ರೋವರ್ಸ್ ರೇಂಜರ್ಸ್   ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.*

Scout-Guide Children's Song Singing Competition at Bangarapet.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!