PLACE YOUR AD HERE AT LOWEST PRICE
ಸರ್ವ ಸದಸ್ಯರ ಸಹಕಾರದೊಂದಿಗೆ ಸಂಘವನ್ನು ಬಲಿಷ್ಠ ಗೊಳಿಸಿ ಅಭಿವೃದ್ಧಿ ಹಾದಿಯಲ್ಲಿ ಕೊಂಡೊಯ್ಯಲಾಗುವುದು, ಎಂದು ನೂತನವಾಗಿ ಶ್ರೀ ಕೃಷ್ಣರಾಜ ಬಳಕೆದಾರರ ಸಹಕಾರಿ ಸಂಘ ಅಧ್ಯಕ್ಷ ಟಿ ಎಂ ನಂಜಪ್ಪ ಅಭಿಪ್ರಾಯ ಪಟ್ಟರು.
ಬಂಗಾರಪೇಟೆ: ಪಟ್ಟಣದಲ್ಲಿ ಮಾದಯ್ಯ ರಸ್ತೆಯಲ್ಲಿ ಇರುವ ಕೇಂದ್ರ ಕಛೇರಿಯಲ್ಲಿ ಶ್ರೀ ಕೃಷ್ಣರಾಜ ಬಳಕೆದಾರರ ಸಹಕಾರಿ ಸಂಘ ಮತ್ತು ಜನತಾ ಬಜಾರ್ ಆಡಳಿತ ಮಂಡಳಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿ, ನಮ್ಮ ಸಂಸ್ಥೆಯು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಈ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ನಂತರ ರಿಟರ್ನಿಂಗ್ ಆಫೀಸರ್ ಬಾಲಕೃಷ್ಣ, ಮಾತನಾಡಿ ಸಹಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ, ಉಪಾಧ್ಯಕ್ಷರಾಗಿ ನಂಜೆವಡೆಯರ್, ಆಯ್ಕೆಯಾಗಿದ್ದಾರೆ, ನಿರ್ದೇಶಕರುಗಳಾಗಿ ಬಿ.ಎಸ್. ಶಿವಶಂಕರ್, ಎಂ ಎಸ್, ಸತೀಶ್, ಬಿ .ಶಂಕರಪ್ಪ, ವೀರಭದ್ರಪ್ಪ, ಬಿ.ಎಸ್. ತೋಂಟೇಶ್, ವೆಂಕಟೇಶಪ್ಪ, ಕೆ ಸಿ ರಮೇಶ್, ಕೆ ಕೆ. ನರಸಪ್ಪ, ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.