ಬಾಂಗ್ಲಾ ದೇಶದಲ್ಲಿ ಹಿಂಸಾಚಾರ:ಕೋಲಾರದಲ್ಲಿ ಟೊಮೆಟೊ ಬೆಲೆ ಕುಸಿತ
ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹೋರಾಟ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲಿನ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ರಾಜಕೀಯ ಪ್ರಕ್ಷುಬ್ದತೆ ಉಂಟಾಗಿದೆ. ಇದು ಭಾರತ-ಬಾಂಗ್ಲಾ ನಡುವಿನ ವಹಿವಾಟುಗಳ ಮೇಲೂ…
ಕೋಲಾರ ಜಿಲ್ಲೆಯಲ್ಲಿ ನಿಧಾನ ವಿಷವಾಗುತ್ತಿರುವ ನೀರು !
-ಕೆ.ಎಸ್.ಗಣೇಶ್ ಕೋಲಾರ: ಹಲ್ಲು ಮೂಳೆಗಳ ಸವೆತ, ಕೀಲು ಮೊಣಕಾಲು ನೋವು, ಸವೆತ, ಹೃದಯ ಕಾಯಿಲೆಗಳಿಂದ ಹಠಾತ್ ಮರಣ, ಮೂತ್ರಪಿಂಡ ವೈಫಲ್ಯ, ಚರ್ಮ ವ್ಯಾದಿಗಳು, ನಿಯಂತ್ರಣಕ್ಕೆ ಸಿಗದ ಮಧುಮೇಹ, ಹಾರ್ಮೋನುಗಳಲ್ಲಿ ಏರುಪೇರು, ಥೈರಾಯ್ಡ್, ಸಂತಾನೋತ್ಪತ್ತಿ ಸಮಸ್ಯೆಗಳು, ಕಣ್ಣಿನ ಪೊರೆ, ಜೀರ್ಣಾಂಗ ಸಮಸ್ಯೆ ಹೀಗೆ ಜಿಲ್ಲೆಯ ಜನರು ಅನುಭವಿಸುತ್ತಿರುವ ನಾನಾ ಕಾಯಿಲೆಗಳಿಗೆ ಕುಡಿಯುವ ನೀರೂ ಕಾರಣ ಎಂಬ ಅಚ್ಚರಿಯ ಅಂಶ ಸಂಶೋಧನೆಯಿಂದ ಹೊರ ಬಿದ್ದಿದೆ. ಪ್ಲೋರೈಡ್ ಮಿಶ್ರಿತ ನೀರನ್ನು ನಿರಂತರವಾಗಿ ಸೇವಿಸುತ್ತಿರುವುರಿಂದ ಕೋಲಾರ ಜಿಲ್ಲೆಯ ಜನರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳ ಕುರಿತು ಶ್ರೀದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯ ಜೀವ ರಸಾಯನ ಶಾಸ್ತ್ರ ವಿಭಾಗದ ಫ್ಲೋರೋಸಿಸ್ ರೀಸರ್ಚ್ ಅಂಡ್ ರೆಫೆರಲ್ ಲ್ಯಾಬ್ ವೈದ್ಯರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ತಂಡ ಆಳವಾದ ಸಂಶೋಧನೆ ನಡೆಸುತ್ತಿದೆ. ಫ್ಲೋರೋಸಿಸ್ ಇತಿಹಾಸ: ಅಮೇರಿಕ ರಾಷ್ಟ್ರದ ಕೊಲೊರಾಡೋದಲ್ಲಿ, 1901 ರಲ್ಲಿ ವೈದ್ಯ ಕೆ.ಮೆಕ್ಕೆ ಮಕ್ಕಳ ಹಲ್ಲುಗಳ ಮೇಲೆ ಹಳದಿ ಕಲೆಗಳನ್ನು ಪರೀಕ್ಷಿಸಿ ಇದು ನೀರಿನ ಸರಬರಾಜಿನಲ್ಲಿ ಫ್ಲೋರೈಡ್ ಹೆಚ್ಚಿನ ಸಾಂದ್ರತೆಯೊಂದಿಗೆ ಸಂಬಂಧಿಸಿದೆ ಎಂದು ದೃಡೀಕರಿಸುತ್ತಾರೆ. ಹಲವು ಸಂಶೋಧನೆಗಳು ಮತ್ತು ಪ್ರಯೋಗಗಳಿಂದ ಹಲ್ಲುಗಳು ಹಳದಿಯಾಗಲು ಕಾರಣ ಫ್ಲೋರೈಡ್ನ ಅಕ ಸೇವನೆ ಎಂದು ಅರಿವಾಗುತ್ತದೆ. ಹಲ್ಲಿನ ಕೊಳೆತವನ್ನು ರಕ್ಷಿಸುವಲ್ಲಿ ಫ್ಲೋರೈಡ್ ಪ್ರಮುಖ ಪಾತ್ರವಹಿಸುತ್ತದೆ ಇಂಗ್ಲೆಂಡ್ ಸರ್ಕಾರವು 1970 ರ ದಶಕದಲ್ಲಿ ನೀರಿನ ಡೀಫ್ಲೋರೈಡೀಕರಣ ತಂತ್ರವನ್ನು ಪ್ರಾರಂಭಿಸಿತು, ಅಲ್ಲಿ ಫ್ಲೋರೈಡ್ ಅಲ್ಲದ ಪ್ರದೇಶಗಳಿಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ಕಡಿಮೆ ಪ್ರಮಾಣದಲ್ಲಿ ಫ್ಲೋರೈಡ್ ಅನ್ನು ಬೆರಸಲಾಗುತ್ತಿತ್ತು. ನಂತರ ದಂತ ವೈದ್ಯರು ಸಾಮಾನ್ಯ ಟೂತ್ಪೇಸ್ಟ್ನಲ್ಲಿ ಫ್ಲೋರೈಡ್ ಅನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಭಾರತದಲ್ಲಿ, 20 ನೇ ಶತಮಾನದವರೆಗೆ ಜನರು ಕುಡಿಯುವ, ಅಡುಗೆ ಮತ್ತು ಇತರ ಉಪಯುಕ್ತತೆಗಳಿಗಾಗಿ ಬಾವಿ ನೀರನ್ನು ಹೆಚ್ಚಾಗಿ ಬಳಸುತ್ತಿದ್ದರು. ಕ್ರಮೇಣ ಕೊಳವೆ ಬಾವಿಗಳಿಗೆ ಅವಲಂಬಿತರಾದರು. ಪ್ರಾರಂಭದಲ್ಲಿ ಇದರಿಂದ ಕಾಲರದಂತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುವುದು ಎಂದು ವಿಶ್ಲೇಷಿಸಿದರು. ಆದರೆ ಕೊಳವೆ ಬಾವಿಗಳಿಂದ ನೀರಿನ ಮಟ್ಟ ಕೆಳಗೆ ಹೋದಷ್ಟು ಇತರೆ ತೊಂದರೆಗಳು ಪ್ರಾರಂಭವಾದವು. ಅದರಲ್ಲಿ ಫ್ಲೋರೋಸಿಸ್ ಸಹ ಒಂದು. ಫ್ಲೋರೈಡೀಕರಣವು ಸ್ವಾಭಾವಿಕವಾಗಿ ಭೂಮಿಯ ಒಳಪದರದಲ್ಲಿ ಸಂಭವಿಸಿರುವುದರಿಂದ, ಈ ನೀರಿನಲ್ಲಿನ ಫ್ಲೋರೈಡಿನ ನಿರ್ಮೂಲನೆ ಅಸಾಧ್ಯವಾಯಿತು. ಅಪಾಯಕಾರಿ ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದ ಹಾಗೆ ಕುಡಿಯುವ ನೀರಿನಲ್ಲಿ ಫ್ಲೋರೈಡ್ನ ಮಿತಿ 1.5 ಪಿಪಿಎಂ ವರೆಗೂ ಇರಬಹುದು. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ, ಗರಿಷ್ಠ ದಾಖಲಾದ ನೀರಿನ ಫ್ಲೋರೈಡ್ ಮಟ್ಟವು 3.38 ಪಿಪಿಎಂಗೂ ಅಧಿಕವಾಗಿದೆ, ಇದನ್ನು ಹೆಚ್ಚುವರಿ ಫ್ಲೋರೈಡ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ಫ್ಲೋರೈಡ್ಗೆ ತುತ್ತಾದ ಜನರು ಫ್ಲೋರೋಸಿಸ್ ಎಂಬ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಬಹು ವಿವಿಧ ಆನಾರೋಗ್ಯ ಸಮಸ್ಯೆಗಳಿಂದ ನರಳುತ್ತಿರುವುದು ಸಂಶೋಧನೆಯಿಂದ ಬಹಿರಂಗವಾಗಿದೆ. ನೀರು – ಆಹಾರ ಫ್ಲೋರೈಡ್ ನೈಸರ್ಗಿಕವಾಗಿ ಫ್ಲೋರಿನ್ ಅನಿಲವಾಗಿ ಪ್ರಕಟವಾಗುತ್ತದೆ.ಇದು ಭೂಮಿಯ ಹೊರಪದರದಲ್ಲಿ 13 ನೇಅಂಶವಾಗಿ ಅತ್ಯಂತ ಹೇರಳವಾಗಿರುತ್ತದೆ. ಇದು ನೀರು, ಆಹಾರ ಮತ್ತು ಪಾನೀಯಗಳಲ್ಲಿ ಕಂಡುಬರುತ್ತದೆ. ಜನರು ಸೇವಿಸುವ ಹೆಚ್ಚಿನ…
ಕೋಲಾರ ಕ್ಷೇತ್ರದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ:MP ಮಲ್ಲೇಶ್ ಬಾಬು.
ಬಂಗಾರಪೇಟೆ: ಸಂಸದನಾಗಿ ಆಯ್ಕೆಯಾಗಲು ಬಂಗಾರಪೇಟೆ ಕ್ಷೇತ್ರದ ಜನತೆಯ ಆಶೀರ್ವಾದ ಮುಖ್ಯ ಪಾತ್ರ ವಹಿಸಿದೆ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿರುವ ಅಭಿವೃದ್ದಿ ಯೋಜನೆಗಳ ಕುರಿತು ಈಗಾಗಲೇ ಸಂಬಂದಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಲಾಗಿದೆ ಹಂತ ಹಂತವಾಗಿ ಅಭಿವೃದ್ದಿಗೆ ಆದ್ಯತೆ ನೀಡುವ…
ಆದಾಯಕ್ಕಿಂತ ಅಧಿಕ ಆಸ್ತಿ:ಕೋಲಾರ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ.
ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಸುಮಾರು 11 ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಂದು ಮುಂಜಾನೆಯೇ ಲೋಕಾಯುಕ್ತ ದಾಳಿ ನಡೆಸಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣಗಳ ಬಗ್ಗೆ ಸುದ್ದಿಯಾಗುತ್ತಿರುವ ನಡೆಯುವೇ ಕೋಲಾರ, ಹಾಸನ, ಚಿತ್ರದುರ್ಗ ಸೇರಿದಂತೆ ಒಟ್ಟಾಗಿ 56…
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ ಕೋಲಾರ,ಏಪ್ರಿಲ್.೨೦ : ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು…
ಕೋಲಾರದಲ್ಲಿ ಕೋಮುವಾದಿಗಳನ್ನು ಸೋಲಿಸಿ:ಬಸವರಾಜ್ ಕೌತಾಳ್.
ಕೋಲಾರ:ಕೋಮುವಾದಿ ಕೂಟವಾಗಿರುವ ಕೋಲಾರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಜ್ಯಾತ್ಯಾತೀತತೆ ಮತ್ತು ಸಂವಿಧಾನವನ್ನು ಉಳಿಸುವ ಕೆಲಸ ಮಾಡಲು ದಲಿತರು ಹಿಂದುಳಿದವರು ಮುಂದಾಗಬೇಕು ಎಂದು ದಲಿತ ವಿಮೋಚನೆಯ ಮಾನವ ಹಕ್ಕು ವೇದಿಕೆ ಕರ್ನಾಟಕದ ರಾಜ್ಯ ಸಂಚಾಕ ಬಸವರಾಜ್ ಕೌತಾಳ್ ಹೇಳಿದರು. ಅವರು…
ಕೊನೆಗೂ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಿದೆ.
ಬೆಂಗಳೂರು ಮಾಜಿ ಮೇಯರ್ ವಿಜಯ ಕುಮಾರ್ ಪುತ್ರ ಕೆ.ವಿ.ಗೌತಮ್ ಅವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಿಸಿದ್ದಾರೆ. ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಚಿವ ಕೆ.ಹೆಚ್.ಮುನಿಯಪ್ಪ ಗುಂಪುಗಳ ನಡುವಿನ ಗುಂಪುಗಾರಿಕೆ ಕಾರಣ…
ರಮೇಶ್ ಕುಮಾರ್ ಮತ್ತು ನಾನು ಒಂದಾದರೆ ಕೋಲಾರ, ಚಿಕ್ಕಬಳ್ಳಾಪುರ ಗೆಲುವು ಖಚಿತ:KH ಮುನಿಯಪ್ಪ.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬೇರೆ ವ್ಯಕ್ತಿಯನ್ನು ಅಭ್ಯರ್ಥಿ ಮಾಡುವುದು ಸರಿಯಲ್ಲ. ಅವರಿಗೂ ಬೇಡ, ಇವರಿಗೂ ಬೇಡ ಎಂಬ ಧೋರಣೆಯಿಂದ ಮೂರನೆಯವರನ್ನು ಕಣಕ್ಕಿಳಿಸಿದರೆ ಯಾರೂ ಕೆಲಸ ಮಾಡುವುದಿಲ್ಲ. ಅಲ್ಲದೇ ಅಭ್ಯರ್ಥಿಯಾಗಿ ಬಂದವರು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಸಚಿವ ಕೆ ಎಚ್ ಮುನಿಯಪ್ಪ ಎಚ್ಚರಿಕೆ…
ಕೋಲಾರ ಲೋಕಸಭಾ ಕ್ಷೇತ್ರದಕ್ಕೆ NDA ಅಭ್ಯರ್ಥಿಯಾಗಿ ಮಲ್ಲೇಶ ಬಾಬು.!
ಕೋಲಾರ:ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಲ್ಲೇಶ ಬಾಬು ಬಹುತೇಕ ಖಚಿತ ಎನ್ನಲಾಗುತ್ತದೆ. ಮಾಜಿ ಪ್ರದಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಇಂದು ಹಾಸನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ಖಚಿತಪಡಿಸಿದ್ದಾರೆ. ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ…
ಕೋಲಾರ MP ಕ್ಷೇತ್ರಕ್ಕೆ ಕಾಂಗ್ರೇಸ್ ನಿಂದ ಡಾ.ಎಲ್.ಹನುಮಂತಯ್ಯ ಬಹುತೇಕ ಫಿಕ್ಸ್!.
ಕೋಲಾರ ಲೋಕಸಭಾ ಎಸ್ಸಿ ಮೀಸಲು ಕ್ಷೇತ್ರದಿಂದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್ ಹನುಮಂತಯ್ಯ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ಖಚಿತ ಪಡಿಸಿವೆ. ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರು.…