*ಬೇತಮಂಗಲದಲ್ಲಿ ಆರ್.ಪಿ.ಐ ಪಕ್ಷದ ಕಛೇರಿ ಉದ್ಘಾಟನೆ.*
ಕೆಜಿಎಫ್:ಗ್ರಾಮಾಂತರ ಭಾಗದ ಹೋಬಳಿ ಕೇಂದ್ರವಾದ ಬೇತಮಂಗಲದಲ್ಲಿ ಸೂಕ್ತ ಮಾರುಕಟ್ಟೆ ಮಾಡುವುದರಲ್ಲಿ ಶಾಸಕಿ ರೂಪಕಲಾರವರು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಎಸ್.ರಾಜೇಂದ್ರನ್ ಆರೋಪಿಸಿದರು. ಬೇತಮಂಗಲದ ಹೊಸ ಬಡಾವಣೆಯ ಸಂತೆ ಮೈದಾನದಲ್ಲಿ ಆರ್ಪಿಐ ಪಕ್ಷದ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ ಮಾತನಾಡಿ, ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದರು.…