• Thu. Sep 19th, 2024

ಶ್ರೀನಿವಾಸಪುರ ದರ್ಗಾ ಮುಂದೆ ಸಿ.ಎಲ್-7 ಬಾರ್ ಬೇಡ:ಸ್ಥಳೀಯರ ಒತ್ತಾಯ.

PLACE YOUR AD HERE AT LOWEST PRICE

ಶ್ರೀನಿವಾಸಪುರ ತಾಲ್ಲೂಕು ಗೌನಿಪಲ್ಲಿ ಗ್ರಾಮದ ಅಡ್ಡಗಲ್ ರಸ್ತೆಯಲ್ಲಿರುವ ತಾಜ್ ಮೋಹದ್ದೀನ್ ಬಾಬಾ ದರ್ಗಾ ಹಾಗೂ ಪ್ರಾರ್ಥನಾ ಮಂದಿರದ ಮುಂಭಾಗದಲ್ಲಿ ಸಿ. ಎಲ್.7  ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಲಾಡ್ಜಿಂಗ್ ಪರವಾನಗಿ ನೀಡುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಗೌನಿಪಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರಮೇಶ್ ಬಾಬು ಮಾತನಾಡಿ ಗೌನಿಪಲ್ಲಿ ಗ್ರಾಮದ ಅಡ್ಡಗಲ್ ರಸ್ತೆಯಲ್ಲಿರುವ ತಾಜ್ ಮೋಹದ್ದೀನ್ ಬಾಬಾ ದರ್ಗಾ ಹಾಗೂ ಪ್ರಾರ್ಥನಾ ಮಂದಿರದ ಮುಂಬಾಗದಲ್ಲಿ ಬೈರಗಾನಪಲ್ಲಿ ಬಿ. ವಿ. ಶ್ರೀನಾಥ್ ಎಂಬುವರಿಗೆ ಸಂಬಂಧಿಸಿದ ಕಟ್ಟಡದಲ್ಲಿ ಸಿ. ಎಲ್.7 , ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಲಾಡ್ಜಿಂಗ್ ಪರವಾನಿಗೆ ದೊರೆತ ಬಗ್ಗೆ ಮಾಹಿತಿ ಬಂದಿದೆ.
  ಈಗಾಗಲೆ ಅಭಾಕಾರಿ ಇಲಾಖೆ, ಕೋಲಾರ ಹಾಗೂ ಶ್ರೀನಿವಾಸಪುರ ಕಚೇರಿಯಲ್ಲಿ ಪರವಾನಗಿ ಶುಲ್ಕವನ್ನು ಕಟ್ಟಿ, ಪ್ರಸ್ತಾವನೆ ಯನ್ನು ಸಲ್ಲಿಸಿರುವುದಾಗಿ ತಿಳಿದು ಬಂದಿದ್ದು ಇದನ್ನು  ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಸಿ. ಎಲ್.7, ಗೆ ಗೌಪ್ಯವಾಗಿ ಅಭಾಕಾರಿ ಇಲಾಖಾ ಅಧಿಕಾರಿಗಳಿಂದ ಶಿಫಾರಸ್ಸು ಮಾಡಿ ತಮ್ಮಲ್ಲಿ ಪರವಾನಗಿ ಯನ್ನು ಪಡೆಯಲು ಮುಂದಾಗಿರುತ್ತಾರೆ, ಅಕ್ಕ ಪಕ್ಕದಲ್ಲಿ ಕಡಿಮೆ ಅಂತರದಲ್ಲಿ ವಾಸದ ಮನೆಗಳು, ಚರ್ಚ್ ಪ್ರಾರ್ಥನಾ ಮಂದಿರ, ಶಿಕ್ಷಣ ಸಂಸ್ಥೆ ಹಾಗೂ ದರ್ಗಾ ಇದ್ದು, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಯಾಗುತ್ತದೆ.
ಇದರ ಬಗ್ಗೆ ಗೌನಿಪಲ್ಲಿ ಗ್ರಾಮದ ಸಾರ್ವಜನಿಕರ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನಾಂಗದವರು ಆಕ್ಷೇಪಣೆ ಇರುತ್ತದೆ ಆದ್ದರಿಂದ ಈ ಪ್ರಸ್ತಾವನೆಯನ್ನು ಕೂಡಲೇ ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ  ಅಮೀರ್ ಖಾನ್, ಎಚ್.ಆರ್. ರಹಮತ್ತುಲ್ಲಾ, ಅಮೀರ್ ಜಾನ್, ಅಫ್ರೋಜ್, ಭಾಷಾ, ಅಯಾಸ್, ಮಕಬಲ್ ,ಇತರರು ಸೇರಿದ್ದರು.

Leave a Reply

Your email address will not be published. Required fields are marked *

You missed

error: Content is protected !!