PLACE YOUR AD HERE AT LOWEST PRICE
ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳನ್ನು ರಾಜ್ಯದ ಮತದಾರರಿಗೆ ಮಾಹಿತಿ ನೀಡುವುದರ ಜತೆಗೆ ಬೂತ್ ವಿಜಯಅಭಿಯಾನವನ್ನು ಮನೆ ಮನೆಗೆ ತಲುಪಿಸುವ ಕಾರ್ಯ, ಕಾರ್ಯಕರ್ತರ ಶ್ರಮದಿಂದ ಯಶಸ್ವಿಯಾಗುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸೋಪಾನವಾಗಲಿದೆ ಎಂದು ಕೆಜಿಎಫ್ ಗ್ರಾಮಾಂತರ ಘಟಕಾಧ್ಯಕ್ಷ ಜಯಪ್ರಕಾಶ್ ನಾಯ್ಡು ಹೇಳಿದರು.
ಬೇತಮಂಗಲ ಪಟ್ಟಣದ 1ನೇ ಬ್ಲಾಕ್ನಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮನೆಗಳ ಮೇಲೆ ಬಿಜೆಪಿ ಭಾವುಟ ಹಾರಿಸಿ ಪಕ್ಷದ ಸಂಘಟನೆಗೆ ಶ್ರಮಿಸಲು ಕರೆ ನೀಡಿದರು.
ಪ್ರತಿ ಬೂತ್ನಲ್ಲಿಯೂ ತಂಡ ರಚನೆ ಮಾಡಲಾಗುತ್ತಿದ್ದು, ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿ ಪೊರೈಸಲಾಗುತ್ತದೆ. ಕೆಜಿಎಫ್ನಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ಬಿಜೆಪಿಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಮತಾಗಣೇಶ್, ಸದಸ್ಯೆ ಪ್ರಿಯದರ್ಶಿನಿ ಧರಣಿ, ಓಂ ಸುರೇಶ್, ಶ್ರೀನಿವಾಸ್,
ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಹೇಮಾರೆಡ್ಡಿ, ಎಂ.ವಿಜಿ ಕುಮಾರ್, ಯುವ ಮೋರ್ಚಾಧ್ಯಕ್ಷ ಅರುಣ್ ಹೀರೆಮಠ್, ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್, ಕಾರ್ಯದರ್ಶಿ ಅನೀಲ್, ಉಪಾಧ್ಯಕ್ಷ ಅನೀಲ್, ಹೋಬಳಿ ಅಧ್ಯಕ್ಷ ಸತೀಶ್, ಎಸ್ಸಿ ಮೋರ್ಚಾಧ್ಯಕ್ಷ ಕೃಷ್ಣಮೂರ್ತಿ, ಪಕ್ಷದ ಕಾರ್ಯಕರ್ತರಾದ ಮೋಹನ್, ಬಸವರಾಜ್, ವಿನೋದ್, ಪ್ರವೀಣ್ ಬಾಬು, ಮಂಜು, ವಿಜಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.