PLACE YOUR AD HERE AT LOWEST PRICE
ಮುಳಬಾಗಿಲು ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಸೂಕ್ತ ರೀತಿಯಲ್ಲಿ ಬಸ್ ಒದಗಿಸಬೇಕೆಂದು ಎಸ್.ಎಫ್.ಐ ಸಂಘಟನೆ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಓಂ ಶಕ್ತಿ ಮಾಲಧಾರಿಗಳಿಗೆ ಸಾರಿಗೆ ಸಂಸ್ಥೆ ಬಸ್ಗಳನ್ನು ನೀಡುವುದನ್ನು ನಿಲ್ಲಿಸಿ ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ಅನಿರ್ದಿಷ್ಟಾವಧಿ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ವೇಳೆ ಎಸ್.ಎಫ್.ಐ ರಾಜ್ಯ ಮುಖಂಡ ವಾಸುದೇವರೆಡ್ಡಿ ಮಾತನಾಡಿ, ಬಸ್ಗಳ ಕೊರತೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ. ಬಸ್ಗಳನ್ನು ದೇವಾಲಯಗಳಿಗೆ ಹೋಗುವವರಿಗೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಸಾರಿಗೆ ಡಿಪೊಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಂಯೋಜಕ ಸಮಿತಿ ಅಧ್ಯಕ್ಷ ಮೆಕಾನಿಕ್ ಶ್ರೀನಿವಾಸ್, ಅಮ್ ಆದ್ಮ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಕೀಲುಹೊಳಲಿ ಸತೀಶ್, ಎಸ್.ಎಫ್.ಐ ಮುಖಂಡ ಪುಣ್ಯಹಳ್ಳಿ ಶಂಕರಪ್ಪ, ಶಿವಪ್ಪ, ಸುರೇಶ್ ಇದ್ದರು.