ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಎರಡೂ ಜಿಲ್ಲೆಗಳ ಮಹಿಳೆಯರಿಗೆ ರೈತರಿಗೆ ಡಿಸಿಸಿ ಬ್ಯಾಂಕ್ ಮೂಲಕ ಸಾವಿರಾರು ಕೋಟಿ ಬಡ್ಡಿ ರಹಿತ ಸಾಲ ಕೊಟ್ಟು ಸ್ವಾವಲಂಭಿ ಜೀವನ ರೂಪಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಮಾತನಾಡಲು ನೈತಿಕ ಅರ್ಹತೆ ಇರಬೇಕೆಂದು ಕೆಪಿಸಿಸಿ ಸದಸ್ಯ ಜಿ.ಟಿ ದುರ್ಗಾ ಪ್ರಸಾದ್ ಬಿಜೆಪಿ ಮುಖಂಡ ಮೋಹನಕೃಷ್ಣರ ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿದರು.
ಇತ್ತೀಚಿಗೆ ಬಿಜೆಪಿ ಮುಖಂಡರೊಬ್ಬರು ಕೆಜಿಎಫ್ನಲ್ಲಿ ಸಮಾಜ ಸೇವೆಯ ಹೆಸರಲ್ಲಿ ಶಾಸಕಿ ಡಾ.ರೂಪಕಲಾ ಮತ್ತು ಡಿಸಿಸಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆಂದು ಕದರೀಪುರ ಸೊಸೈಟಿ ವತಿಯಿಂದ ನಡೆದ ಸಾಲ ವಿತರಣೆಯ ವೇದಿಕೆಯಲ್ಲಿ ಅವರು ಮಾತನಾಡುತ್ತಿದ್ದರು.
ಶಾಸಕರ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬಗ್ಗೆ ಮಾತನಾಡುವ ಮೊದಲು ಕೆಜಿಎಫ್ಗೆ ಅವರ ಕೊಡುಗೆ ಏನು ಎಂಬುದನ್ನು ಕ್ಷೇತ್ರದ ಜನತೆಗೆ ತಿಳಿಸಬೇಕೆಂದು ಸಮಾಜ ಸೇವಕ ಮೋಹನಕೃಷ್ಣರನ್ನು ಪರೋಕ್ಷವಾಗಿ ಆಗ್ರಹಿಸಿದರು.
ಶಾಸಕರು ಹಿಂದೆ ಜಿಪಂ ಚುನಾವಣೆಯಲ್ಲಿ ಸೋತು ಮನೆಯಲ್ಲಿದ್ದಾಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆತ್ಮಸ್ಥೈರ್ಯ ತುಂಬಿದ್ದರು ಎಂದು ಶಾಸಕರು ಹೇಳಿದ್ದನ್ನು ತಿರುಚಿ ಗೊವಿಂದ ಗೌಡರು ನನ್ನನ್ನು ಗೆಲ್ಲಿಸಿದ್ದಾರೆ ಅವರೇ ನನ್ನನ್ನು ಗೆಲ್ಲಿಸಿದ್ದು ಎಂದು ಶಾಸಕರು ಹೇಳಿದ್ದಾರೆಂದು ವಿರೋಧಿಗಳು ತಿರುಚಿ ಹೇಳಿದ್ದಾರೆ.
ಶಾಸಕರನ್ನು ನಾವು, ಮತದಾರರು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೇವೆ. ಇನ್ನೂ 5 ಬಾರಿ ಅವರೆ ಶಾಸಕರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಶಾಸಕಿ ರೂಪಕಲಾರ ಅಭಿವೃದ್ಧಿಯನ್ನು ಕ್ಷೇತ್ರದ ಜನ ಮೆಚ್ಚಿಕೊಂಡಿದ್ದಾರೆ ಎಂದರು.
ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದಲ್ಲಿ 500 ಕೋಟಿ ರೂ., ಕಾಮಗಾರಿಗಳನ್ನು ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ 70 ಸಾವಿರ ಕುಟುಂಭಗಳಿಗೆ ಯಾವುದೇ ಜಾತಿ-ಧರ್ಮ ಬೇದ ಭಾವವಿಲ್ಲದೆ ಆಹಾರ ಕಿಟ್ ವಿತರಿದ್ದರು ಆಗ ಯಾವುದೇ ಚುನಾವಣೆ ಇರಲಿಲ್ಲ ಎಂದು ಹೇಳಿದರು.
ಈಗ ಚುನಾವಣೆ ಪ್ರಾರಂಭವಾಗಿದ್ದು, ತಾವು ಕೆಜಿಎಫ್ನಲ್ಲಿ 20 ಸಾವಿರ ಕಿಟ್ ವಿತರಿಸಿದ್ದೇವೆ ಶಾಸಕರು 50 ಸಾವಿರ ಕಿಟ್ ವಿತರಿಸಲಿ ಎಂದು ಸಾವಲ್ ಹಾಕಿರುವುದು ಕೀಳು ಮಟ್ಟದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಶಾಸಕರು ಇದುವರೆಗೂ 250ಕ್ಕೂ ಅಧಿಕ ಉಚಿತ ಬಸ್ಗಳನ್ನು ವ್ಯವಸ್ಥೆ ಮಾಡಿದ್ದಾರೆ. ತಾವು ಇದುವರೆಗೂ 25 ಬಸ್ಗಳನ್ನು ಕಳುಹಿಸಿ 2 ಸಾವಿರ ಬಸ್ ಕಳುಹಿಸಿದಷ್ಟು ಪ್ರಚಾರ ಮಾಡುತ್ತಿದ್ದೀರಿ ಎಂದು ಟಾಂಗ್ ನೀಡಿದರು.
ಶಾಸಕರಿಗೆ ತಮ್ಮನ್ನು ಕಂಡರೆ ಭಯ ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು ಮೊದಲು ಅವರ ಸ್ವಗ್ರಾಮದಲ್ಲೇ
ಇರುವ ಆಕಾಂಕ್ಷಿಗಳನ್ನು ಮತ್ತು ತಾಲೂಕಿನಲ್ಲಿರುವ 10 ಮಂದಿ ಅಭ್ಯರ್ಥಿಗಳನ್ನು ಸರಿ ಮಾಡಿಕೊಂಡು ದಡ ಸೇರಲಿ ಎಂದು ಸಲಹೆ ನೀಡಿದರು.
ನಿಮ್ಮ ಸಮಾಜ ಸೇವೆಯನ್ನು ಇನ್ನೂ 20-25 ವರ್ಷಗಳ ಕಾಲ ಮಾಡಿ ನಮ್ಮ ಶಾಸಕರಿಗೆ ವಯಸ್ಸಾಗುತ್ತದೆ ನಂತರ
ಅವರೆ ರಾಜಕೀಯ ನಿವೃತ್ತಿ ಘೋಶಿಸುತ್ತಾರೆ ನಂತರ ನಿಮ್ಮ ಸೇವೆಯನ್ನು ನೋಡೊಣವೆಂದು ಲೇವಡಿ ಮಾಡಿದರು.