PLACE YOUR AD HERE AT LOWEST PRICE
ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವ ಐ.ಎ.ಎಸ್ ಐಪಿಎಸ್ ಅಕಾರಗಳ ಬೀದಿ ರಂಪಾಟ ಆಗುತ್ತಿದ್ದರೂ ಕ್ರಮ ಕೈಗೊಳ್ಳದ ಸರ್ಕಾರದ ಕ್ರಮವನ್ನು ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗದ ಕೆಲಸ ಶಾಸಕಾಂಗ ನ್ಯಾಯಾಂಗಗಳ ನೀತಿ ನಿರೂಪಣೆ ಸಲಹೆ ಸೂಚನೆಗಳನ್ನು ಪಾಲಿಸಿ ಕಾರ್ಯಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸೀಮಿತವಾಗಿದೆ.
ಕಾರ್ಯಾಂಗದಡಿ ನೇಮಕಗೊಳ್ಳುವ ಅಕಾರಿಗಳಿಗೆ ಜನ ಸೇವಕರಾಗಿ ಕೆಲಸ ಮಾಡಬೇಕಾದ ಅಕಾರಿಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಸಂವಿಧಾನದ ತತ್ವ ಸಿದ್ದಾಂತಕ್ಕೆ ವಿರೋಧವಾಗಿದೆ ಎಂದು ಕಿಡಿಕಾರಿದ್ದಾರೆ.
ಇಬ್ಬರ ಮಹಿಳಾ ಅಕಾರಿಗಳು ಆಯಾ ವ್ಯಾಪ್ತಿಯ ಜಲ್ವಂತ ಸಮಸ್ಯೆಗಳ ಬಗ್ಗೆ ಗಮನಹರಿಸಿ ಸರ್ಕಾರದ ಗಮನಕ್ಕೆ ತಂದು ಬಗೆಹರಿಸಬೇಕಾದ ಇವರು ತನ್ನ ಸ್ಥಾನವನ್ನು ಮರೆತು ಬೀದಿ ನಾಯಿಗಳಂತೆ ಜಗಳವಾಡಿಕೊಂಡು ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಬಿಂಬನೆ ಮಾಡಿಕೊಳ್ಳುತ್ತಿರುವುದು ಇವರ ಸ್ಥಾನಕ್ಕೆ ಶೋಭೆಯಲ್ಲ ಜೊತೆಗೆ ಸಾಮಾಜಿಕ ಜಾಲತಾಣ ಯಾರಿಗೂ ಪರಿಹಾರ ಕಲ್ಪಿಸುವ ತಾಣವಲ್ಲ ಎಂದು ತಿಳಿಸಿದ್ದಾರೆ.
೨೪ ಗಂಟೆಯಲ್ಲಿ ಇಬ್ಬರ ಅಕಾರಿಗಳ ವಿರುದ್ದ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಿ ಇಲ್ಲವೇ ಇಬ್ಬರೂ ಅಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಅಕಾರಿಗಳನ್ನು ನೇಮಕ ಮಾಡಿ ಇಲ್ಲವಾದರೆ ರೈತ ಸಂಘದಿಂದ ರಾಜ್ಯ ವ್ಯಾಪಿ ಸರ್ಕಾರದ ವಿರುದ್ದ ಬಾರ್ಕೋಲ್ ಚಳುವಳಿ ಮಾಡುವ ಎಚ್ಚರಿಕೆಯನ್ನು ಪತ್ರಿಕಾ ಹೇಳಿಕೆಯ ಮುಖಾಂತರ ಸರ್ಕಾರಕ್ಕೆ ನೀಡಿದರು.
ಸುದ್ದಿ ಓದಿ ಹಂಚಿ: