• Thu. May 16th, 2024

PLACE YOUR AD HERE AT LOWEST PRICE

ಕೆಜಿಎಫ್‍:ಚುನಾವಣೆ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆ, ಆಮಿಷಗಳನ್ನು ಒಡ್ಡಿ ಮತಗಳು ಪಡೆಯುವ ನಾಯಕರ ಬಗ್ಗೆ ಎಚ್ಚರವಿದ್ದು, ಸದಾ ಬಡವರ, ದೀನ ದಲಿತರ, ಕೂಲಿ ಕಾರ್ಮಿಕರ, ಪರ ಚಿಂತನೆ ಇರುವ ನಿರುದ್ಯೋಗ ಹೋಗಲಾಡಿಸುವ ಸ್ವಕ್ಷೇತ್ರ ಬಿಜೆಪಿ ಅಭ್ಯರ್ಥಿಗೆ ಮತಕೊಟ್ಟು  ಗೆಲ್ಲಿಸಿ ಎಂದು ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಹಾಗೂ ಟಿಕೆಟ್ ಆಕಾಂಕ್ಷಿ ಬಿ.ಸುರೇಶ್ ಹೇಳಿದರು.

ಅವರು ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ವಿಜಯ್ ಸಂಕಲ್ಪ್ ಅಭಿಯಾನದ ಅಡಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಉಚಿತ ಕಂಬಳಿ ವಿತರಣೆ ಮಾಡಿ ಮಾತನಾಡಿ, ಕೆಜಿಎಫ್ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದೆ.

ಈ ಕ್ಷೇತ್ರವು ಮೀಸಲು ವಿಧಾನ ಸಭಾ ಕ್ಷೇತ್ರವಾಗಿದ್ದು, ವಲಸಿಗರ ಅಟ್ಟಹಾಸ ಹೆಚ್ಚಾಗಿದೆ. ಆದರೆ ಮತದಾರರು ಚುನಾವಣೆ ಸಂದರ್ಭದಲ್ಲಿ ಆಕಾಂಕ್ಷಿಗಳು ನೀಡುವ ಸುಳ್ಳು ಭರವಸೆ ಮತ್ತು ಆಮಿಷಗಳಿಗೆ ಬಲಿಯಾಗದೆ ಇಲ್ಲಿನವರಿಗೆ ಮತ ನೀಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಕ್ಯಾಸಂಬಳ್ಳಿ ಗ್ರಾಪಂ ಉಪಾಧ್ಯಕ್ಷೆ ಆಂಜಲಮ್ಮ ಪ್ರತಾಪ್, ಯುವ ಮುಖಂಡ ವಿಕ್ಕಿ ರೆಡ್ಡಿ, ಮುಖಂಡರಾದ ಶಿವಾರೆಡ್ಡಿ, ಬಿ.ವಿ ಸುಭ್ರಮಣ್ಯಂ, ಗಂಗಪ್ಪ, ಗಣೇಶ್, ಸಂಪಂಗಿ, ಭಾಸ್ಕರ್, ಕಿರಣ್ ಮೊದಲಾದವರಿದ್ದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!