PLACE YOUR AD HERE AT LOWEST PRICE
ಕಾಯಕ ಸಮುದಾಯವಾದಂತ ಸವಿತಾ ಸಮಾಜಕ್ಕೆ ಕೇವಲ ೫ ಕೋಟಿ ರೂ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬಾ ಅನ್ಯಾಯ ಆಗುವ ಅಪಮಾನ ಮಾಡಿರುತ್ತಾರೆ ಎಂದು ಕೋಲಾರ ಜಿಲ್ಲಾ ಸವಿತಾ ಸಮಾಜದ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್ ಬೇಸರಿಸಿದ್ದಾರೆ.
೮೦೭ ಕೋಟಿ ೨೦೨೩ರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಬಿಡುಗಡೆ ಮಾಡಿರುವ ಪಟ್ಟಿ ಸಮೇತ ತಮ್ಮ ಗಮನಕ್ಕೆ ತರುತ್ತಾ, ಕರ್ನಾಟಕ ರಾಜ್ಯದಲ್ಲಿ ಸುಮಾರು ೧೫ ಲಕ್ಷ ಜನಸಂಖ್ಯೆ ಇರುವ ಸವಿತಾ ಸಮಾಜಕ್ಕೆ ಕೇವಲ ೫ ಕೋಟಿ ರೂಗಳ ಅನುದಾನವನ್ನು ಕೊಟ್ಟಿರುತ್ತಾರೆ. ಇನ್ನೂರು ೨೪ ಕ್ಷೇತ್ರಗಳಿಗೆ ಸೇರಿ ೫ ಕೋಟಿಯನ್ನು ಕೊಟ್ಟಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.
ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಒಂದಾಗಿರುವ ಸವಿತಾ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಬಹಳ ಹಿಂದುಳಿದಿರುತ್ತದೆ. ಬಿಜೆಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಕೇವಲ ೫ ಕೋಟಿಯನ್ನು ಕೊಟ್ಟು ಬೇರೆ ಸಮಾಜಗಳಿಗೆ ಅನುದಾನ ಕೊಟ್ಟಿರುವ ಬಗ್ಗೆ ನಮಗೆ ಯಾವುದೇ ರೀತಿಯಾದ ಅಸಮಾಧಾನವಿಲ್ಲ. ಆದರೆ ನಮ್ಮಂತ ಕಾಯಕ ಸಮುದಾಯಗಳನ್ನು ಕಡೆಗಣಿಸಿರುವುದು ಬಹಳ ದುಃಖಕರ ಸಂಗತಿ.
ಮುಖ್ಯಮಂತ್ರಿಗಳು ಈ ತಾರತಮ್ಯವನ್ನು ಕೂಡಲೇ ಸರಿ ಸರಿಪಡಿಸಿ ಕನಿಷ್ಠ ೨೦ ಕೋಟಿ ರೂಗಳನ್ನು ಈ ಸಮುದಾಯಕ್ಕೆ ನೀಡಬೇಕೆಂದು ಆಗ್ರಹಿಸುತ್ತೇವೆ. ಒಂದು ವೇಳೆ ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ತಿರಸ್ಕರಿಸಿದ್ದೆ ಆದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಮುದಾಯದವರನ್ನು ಸಂಘಟನೆ ಮಾಡಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹೋರಾಟಗಳನ್ನು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸುದ್ದಿ ಓದಿ ಹಂಚಿ: