• Sat. May 18th, 2024

PLACE YOUR AD HERE AT LOWEST PRICE

ಕೆಜಿಎಫ್:ಭಾರತ ದೇಶದಲ್ಲಿ ಜನ ಸರ್ವಧರ್ಮಗಳು ಒಂದೇ ಎಂಬ ಭಾವನೆಯಿಂದ ಜೀವಿಸುತ್ತಿದ್ದು, ಎಲ್ಲರೂ ಒಳ್ಳೆಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹೇಳಿದರು.

ತಾಲ್ಲೂಕಿನ  ಸುಂದರಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಹಿಂಧೂ ಧರ್ಮದ ಗ್ರಂಥ ಮಹಾಭರತ, ಮುಸ್ಲಿಂ ಸಮುದಾಯದ ಗ್ರಂಥ ಖುರಾನ್ ಎರಡರಲ್ಲೂ ಸಹ ಶಾಂತಿಯನ್ನು ಕಾಪಾಡಲು ತಿಳಿಸುತ್ತದೆ.

ಕ್ಷೇತ್ರದ ಜನತೆ ಶಾಸಕರಾಗಿ ಅವಕಾಶ ನೀಡಿದ ಮೇಲೆ ಯಾವುದೇ ತಾರತಮ್ಯ ಮಾಡದೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ, 2 ವರ್ಷಗಳ ಕೊರೊನಾ ಸಂದರ್ಭದಲ್ಲಿಯೂ ಸರಕಾರದಲ್ಲಿ ಒತ್ತಡ ಹಾಕಿ ಅನುದಾನ ತಂದಿದ್ದೇನೆ ಎಂದರು.

ಸುಂದರಪಾಳ್ಯ ಗ್ರಾಪಂ ಅಧ್ಯಕ್ಷ ರಾಂಬಾಬು ಮಾತನಾಡಿ, ಶಾಸಕರ ರೂಪಕಲಾ ಅವರ ವಿರುದ್ಧ ವಿರೋಧ ಪಕ್ಷದವರು ಅನಾವಶ್ಯಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದರೂ ಶಾಸಕರು ಮಾತ್ರ ಯಾವುದೇ ಆರೋಪಕ್ಕೆ ಕಿವಿ ಕೊಡದೆ ಅಭಿವೃದ್ಧಿಯ ಮೂಲಕ ಉತ್ತರ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ತಾಪಂ ಮಾಜಿ ಸದಸ್ಯರಾದ  ಜಯರಾಮ್ ರೆಡ್ಡಿ, ವೆಂಕಟರಾಮ್, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಲಕ್ಷ್ಮೀಪತಿ, ಅಪ್ರೋಜ್, ರಿಜ್ವಾನ್ ಮೊದಲಾದವರಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!