PLACE YOUR AD HERE AT LOWEST PRICE
ಕೆಜಿಎಫ್:ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕೆ ಬಹುಮತದ ಸರಕಾರ ನೀಡಲು ರಾಜ್ಯದ ಜನತೆಯೇ ನಿರ್ಧಾರಿಸಿದ್ದಾರೆಂದು ಕೆಜಿಎಫ್ ಕ್ಷೇತ್ರದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ವಿಶ್ವಾಸ ವ್ಯಕ್ತ ಪಡಿಸಿದರು.
ಅವರು ಶ್ರೀನಿವಾಸಸಂದ್ರ ಹಾಗೂ ಕಂಗಾಂಡ್ಲಹಳ್ಳಿ ಗ್ರಾಪಂಯ ಹಳ್ಳಿಗಳಿಗೆ ಭೇಟಿ ನೀಡಿ ಜನತೆಯನ್ನು ಉದ್ದೇಶಿಸಿ ಮಾತನಾಡಿ, ಕೆಜಿಎಫ್ ಕ್ಷೇತ್ರದ ಯಾವುದೇ ಗ್ರಾಮಕ್ಕೂ ಭೇಟಿ ನೀಡಿದರು ಜನರು ಈ ಭಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡುತ್ತಿದ್ದಾರೆಂದರು.
ರಾಜ್ಯದಲ್ಲಿ 2023ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸರಕಾರ ರಚನೆ ಮಾಡುವ ವಿಶ್ವಾಸ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗಿಂತ ವಿರೋಧ ಪಕ್ಷದವರಿಗೆ ಜಾಸ್ತಿ ವಿಶ್ವಾಸ ಇದೆ ಎಂದರು.
2018ರಲ್ಲಿ ತಾಲ್ಲೂಕಿನ ಸುಮಾರು 8 ಸಾವಿರ ರೈತರು ಕುಮಾರಸ್ವಾಮಿ ಸರಕಾರದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಿಕೊಂಡಿದ್ದಾರೆ, ಈ ಭಾರಿ ತಾಲ್ಲೂಕಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆಂದರು.
ತಾಲ್ಲೂಕಿನ ಯಾವುದೇ ಗ್ರಾಮಕ್ಕೂ ಭೇಟಿ ನೀಡಿದರೂ ವಿವಿಧ ರಾಷ್ಟ್ರೀಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಈ ಭಾರಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿ ಗೆಲ್ಲಿಸುವ ಭರವಸೆ ನೀಡುತ್ತಿರುವುದು ಸಂತಸ ಸಂಗತಿ ಎಂದರು.
ಐವಾರಹಳ್ಳಿ ಮುಖಂಡ ರಾಮಪ್ಪ ಮಾತನಾಡಿ, ಸುಮಾರು ವರ್ಷಗಳಿಂದ ಕೆಜಿಎಫ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಯ ಕೊರತೆಯಾಗಿತ್ತು, ಈ ಭಾರಿ ಒಳ್ಳೆಯ ವಿದ್ಯಾವಂತ ಅಭ್ಯರ್ಥಿಯಾಗಿ ಬಂದಿದ್ದು, ಜೆಡಿಎಸ್ ಪಕ್ಷ ಗೆಲ್ಲುವುದಕ್ಕೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಮನೋಹರ್ ರೆಡ್ಡಿ, ಮುಖಂಡರಾದ ನಕ್ಕನಹಳ್ಳಿ ರಾಮರೆಡ್ಡಿ, ಕೃಷ್ಣಂರಾಜು, ವೆಂಕಟೇಶಪ್ಪ, ರಾಮಪ್ಪ, ಪವನ್, ಮುನಿವೆಂಕಟ, ಭಾನುಪ್ರಕಾಶ್, ಪವನ್, ನವೀನ್, ಶಂಕರ್ ಸೇರಿದಂತೆ ವಿವಿಧ ಗ್ರಾಮಗಳ ಯುವಕರು ಹಾಗೂ ಮುಖಂಡರು ಹಾಜರಿದ್ದರು.