• Mon. Sep 16th, 2024

PLACE YOUR AD HERE AT LOWEST PRICE

ಕೆಜಿಎಫ್:2023ರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿರುವ ಹಿನ್ನಲೆ ಕರ್ತವ್ಯಕ್ಕೆ ಹಾಜರಾಗುವ ಸಲುವಾಗಿ ಚುನಾವಣೆಯ ಕವಾಯತು ತರಬೇತಿ ಹಾಗೂ ಚುನಾವಣೆ ಕಾಯ್ದೆಗಳ ಬಗ್ಗೆ ಜಿಲ್ಲಾ ಸಹಾಯಕ ಭೋದಕ ಬಿ.ರವಿಕುಮಾರ್ ಗೃಹರಕ್ಷಕರಿಗೆ ತಿಳುವಳೀಕೆ ಮೂಡಿಸಿದರು.

ಬೇತಮಂಗಲದ ಹಳೆ ಬಡಾವಣೆಯ ಸರ್ಕಾರಿ ಕನ್ನಡ ಹಿರಿಯ ಮಾದರಿ ಶಾಲೆಯ ಅವರಣದಲ್ಲಿ ಬೇತಮಂಗಲ ಹಾಗೂ ಸುಂದರಪಾಳ್ಯ ಘಟಕದ ಗೃಹ ರಕ್ಷಕರು ಹಾಗೂ ಗೃಹ ರಕ್ಷಕಿಯರಿಗೆ 2 ದಿನಗಳ ಕಾಲ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿ ಕಾರ್ಯಗಾರದಲ್ಲಿ ಲಾಟಿ ಡ್ರಿಲ್ ತರಬೇತಿ ಮತ್ತು ಚುನಾವಣೆಯ ನೀತಿ ಸಹಿತೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಲಾಯಿತು. ಈ ತರಬೇತಿ ವೇಳೆ ಬೇತಮಂಗಲ ಘಟಕ  ಪ್ರಭಾರಿ ಘಟಕಾಧಿಕಾರಿ ಮಂಜುನಾಥ್, ಸುಂದರಪಾಳ್ಯ ಘಟಕದ ಪ್ರಭಾರಿ ಘಟಕಾಧಿಕಾರಿ ಗಂಗಾಧರ್, ಗೋಪಾಲ್ ಕೃಷ್ಣ ಶೆಟ್ಟಿ ಸೇರಿದಂತೆ ಬೇತಮಂಗಲ ಹಾಗೂ ಸುಂದರಪಾಳ್ಯ ಘಟಕದ ಗೃಹ ರಕ್ಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!