• Mon. Sep 16th, 2024

PLACE YOUR AD HERE AT LOWEST PRICE

ಆದಿಮ ಬೆಳವಣಿಗೆಗೆ ಎಲ್ಲರ ಸಹಕಾರವೂ ಇರಲಿ ಎಂದು ಶಿಕ್ಷಕ ಎಸ್.ನಾರಾಯಣಸ್ವಾಮಿ ಹೇಳಿದರು.
ಅಂತರಗಂಗೆ ಬೆಟ್ಟದ ಆದಿಮ ಸಾಂಸ್ಕೃತಿಕ ಕುಟೀರ ಶಿವಗಂಗೆಯಲ್ಲಿ ೧೯೧ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಮ್ಯಾಕ್‌ಬೆತ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆದಿಮ ಕೇಂದ್ರ ಒಂದು ರೂಪಾಯಿಂದ ಆರಂಭವಾಯಿತು. ಅನೇಕರು ಆದಿಮ ಈ ಮಟ್ಟಕ್ಕೆ ಬೆಳೆಯಲು ಕಾರಣರಾಗಿದ್ದಾರೆ. ಕೊಮ್ಮಣ್ಣ, ಹ.ಮಾ.ರಾಮಚಂದ್ರಣ್ಣ ಕೇಂದ್ರದ ಜವಾಬ್ಧಾರಿಯನ್ನು ವಹಿಸಿಕೊಂಡು ನಡೆಸುತ್ತಿದ್ದಾರೆ. ಇಲ್ಲಿ ಹಣದ ಅವಶ್ಯಕತೆ ಬಹಳ ಇದೆಯಾದ್ದರಿಂದ ನಾವೆಲ್ಲಾ ಆರ್ಥಿಕ ನೆರವು ನೀಡುವ ಅಗತ್ಯವಿದೆ, ಆದಿಮ ಬೆಳವಣಿಗೆಗೆ ಬೇಕಾದ ಸಹಕಾರ, ಸೇವೆ ನಮ್ಮೆಲ್ಲರ ಕಡೆಯಿಂದ ಆದರೆ ಇನ್ನೂ ಹೆಚ್ಚಿನ ಕೆಲಸಗಳು ಮಾಡಲು ಸಾಧ್ಯವಾಗುತ್ತದೆ ಎಂದರು.

ಇಂಚರ ನಾರಾಯಣಸ್ವಾಮಿ ಮಾತನಾಡಿ, ಇವತ್ತು ಯುವ ಪೀಳಿಗೆ ಆಧುನಿಕತೆಗೆ ಹೊಂದಿಕೊಂಡು ಗೊತ್ತು ಗುರಿಯಿಲ್ಲದ ಕಡೆ ನಡೆಯುವಂತಾಗಿದೆ. ವ್ಯವಸ್ಥೆ ಯಲ್ಲಿ ನೆಲ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇಲ್ಲಿ ಚುಕ್ಕಿ ಮೇಳ ನಡೆಯಲಿದೆ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳ ಪರಿಚಯ, ಕಲಿಕೆ ಹಾಗೂ ಅವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಹತ್ತಾರು ವರ್ಷಗಳಿಂದ ಆದಿಮ ಮಾಡುತ್ತಾ ಬಂದಿದೆ. ನಿಮ್ಮ ಮಕ್ಕಳನ್ನು ಈ ವರ್ಷ ನಡೆಯಲಿರುವ ಚುಕ್ಕಿ ಮೇಳಕ್ಕೆ ಮಕ್ಕಳನ್ನು ಸೇರಿಸಿ ಮೊಬೈಲ್ ಸಂಸ್ಕೃತಿಯಿಂದ ಹೊರ ಬರುವಂತೆ ಮಾಡಿ ಎಂದರು.

ನಾಟಕ ನಿರ್ದೇಶಕ ಮೈಕೋ ಶಿವಶಂಕರ್ ಮಾತನಾಡುತ್ತಾ, ಆದಿಮ ಸಂಸ್ಥೆ ನಮ್ಮ ಮನೆ ಇದ್ದಂತೆ . ನಾವು ಈ ಮೊದಲು, ಆದಿಮ ಆರಂಭದಿಂದಲೂ ಜೊತೆಗಿದ್ದೇವೆ. ಇಲ್ಲಿನ ರಂಗವೇದಿಕೆಗಳು ಪ್ರಕೃತಿಯ ನಡುವೆ ಇರುವುದರಿಂದ ರಂಗಭೂಮಿ ಹಾಗೂ ಜಾನಪದ ಕಲಾವಿದರಿಗೆ ಪಾತ್ರ ನಿರ್ವಹಿಸಲು ಸೂರ್ತಿ ನೀಡುತ್ತವೆ. ನಮಗೆ ಇಲ್ಲಿ ಅನೇಕ ನಾಟಕಗಳು ಪ್ರದರ್ಶಿಸಲು ಅವಕಾಶ ನೀಡಿರುವ ಆದಿಮ ಕೇಂದ್ರದ ಎಲ್ಲಾ ಪದಾಽಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ರಂಗದರ್ಶನ ತಂಡ ಬೆಂಗಳೂರು, ಅಭಿನಯಿಸಿದ, ಜಗತ್ ಪ್ರಸಿದ್ಧ ನಾಟಕಕಾರ ಶೇಕ್ಸ್ ಪಿಯರ್ ರಚನೆಯ ’ಮ್ಯಾಕ್ ಬೆತ್ ’ ಕನ್ನಡ ಅನುವಾದ ರಾಮಚಂದ್ರದೇವರ ನಾಟಕ ಪ್ರದರ್ಶನವಾಯಿತು. ಮ್ಯಾಕ್ ಬೆತ್ ಮೋಸ ಕುತಂತ್ರ, ಜಾಲದ ವಾದಗಳು ರಂಗದ ಮೇಲೆ ಪಾತ್ರಧಾರಿಗಳ ಸಂಭಾಷಣೆ ಮೂಲಕ ನಡೆಯುತ್ತದೆ. ಸರ್ವಾಧಿಕಾರಿ ಧೋರಣೆಗಳು ರಾಜ್ಯದ ಸೈನ್ಯ, ಸೈನಿಕರ ಮೇಲೆ ಹೇಗೆ ಪ್ರಭಾವಿಸುತ್ತವೆ. ಏನೆಲ್ಲಾ ಅನಾಹುತಗಳು ಯುದ್ಧದ ಪರಿಣಾಮವಾಗಿ ಆಗುತ್ತವೆ. ಅಧಿಕಾರ ದಾಹದಿಂದ ಏನೆಲ್ಲಾ ಮರೆತು ಮೆರೆಯಲಾಗುತ್ತದೆ. ಕೊನೆಗೆ ಮಾನಸಿಕವಾಗಿ ಕುಗ್ಗಿ, ಭ್ರಮೆ ನಿರಸನಗಳು ಕಾಡುತ್ತಾ ಲೇಡಿ ಮ್ಯಾಕ್ ಬೆತ್ ಅಂತ್ಯವಾದರೆ, ಯುದ್ಧದಲ್ಲಿ ಮ್ಯಾಕ್ ಬೆತ್ ಸಾಯುತ್ತಾನೆ. ಸರ್ವಾಧಿಕಾರದ ಹಿನ್ನೆಲೆಯಲ್ಲಿ ಯಕ್ಷಣಿ ಪಾತ್ರಗಳು ವಿವಿಧ ರೂಪಗಳಲ್ಲಿ, ರೂಪಕಗಳಾಗಿ ’ಪಾಪ ಪುಣ್ಯ, ಪುಣ್ಯ ಪಾಪ, ಕತ್ತಲೆ ಬೆಳಕು, ತಪ್ಪು ಶಿಕ್ಷೆ’ ಹೇಳುತ್ತಾ ಕಾಣಿಸಿರುವುದು ನಾಟಕದಲ್ಲಿವೆ.

ಮ್ಯಾಕ್ ಬೆತ್ ನಾಟಕದಲ್ಲಿ ಸುದೀರ್ಘ ಕಥಾ ಸನ್ನಿವೇಶಗಳು ಇದ್ದರೂ ನಿರ್ದೇಶಕ ಅದನ್ನು ಅಚ್ಚುಕಟ್ಟಾಗಿ ಎಡಿಟ್ ಮಾಡಿಕೊಂಡು ಎಲ್ಲಾ ಮುಖ್ಯ ಪಾತ್ರಗಳ ಮೂಲಕ ಪ್ರದರ್ಶನ ನೀಡಿದರು. ಸಂಗೀತ: ವೆಂಕಟೇಶ್ ಜೋಷಿ, ಸುಮುಖ್ ಭಾರಧ್ವಾಜ್, ಪ್ರಸಾಧನ: ರಾಮಕೃಷ್ಣ ಬೆಳ್ತೂರು, ಬೆಳಕು: ರವಿಶಂಕರ್ ,ಏಸುಪಾದಂ, ನಿರ್ವಹಿಸಿದ್ದಾರೆ .

ವೇದಿಕೆ ಕಾರ್ಯಕ್ರಮವನ್ನು ಕಾಳಿದಾಸ್, ನಾವೆಂಕಿ ಕೋಲಾರ, ಎನ್. ಗೋವಿಂದಪ್ಪ, ಪ್ರವೀಣ್ ನಡೆಸಿಕೊಟ್ಟರು.

 

Leave a Reply

Your email address will not be published. Required fields are marked *

You missed

error: Content is protected !!