PLACE YOUR AD HERE AT LOWEST PRICE
ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಿ ಕೆ ವೆಂಕಟಶಿವಾರೆಡ್ಡಿ ಪಟ್ಟಣದಲ್ಲಿ ರೋಡ್ ಶೋ ಹಾಗೂ ಸೇರ್ಪಡೆ ಕಾರ್ಯಕ್ರಮವನ್ನು ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರು.
ಶ್ರೀನಿವಾಸಪುರ ಪಟ್ಟಣದ ಕಟ್ಟೆಕೆಳಗಿನಪಾಳ್ಯದಿಂದ ಆರಂಭವಾದ ರೋಡ್ ಶೋ ಮುಳಬಾಗಿಲು ವೃತ್ತ ದಿಂದ ಎಂ ಜಿ ರಸ್ತೆಯ ಮೂಲಕ ಭರ್ಜರಿ ರೋಡ್ ಶೋ ದೊಂದಿಗೆ ವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ತಲುಪಿತು.
ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷ ತೊರೆದು ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರಿಗೆ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಹೂವಿನ ಮಾಲೆ ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.
ಈ ವೇಳೆ ಅವರು ಮಾತನಾಡಿ ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರಿಗೆ ಸ್ವಾಗತ. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ನಮ್ಮ ಕಾರ್ಯಕರ್ತರನ್ನು ನೋಡಿ ಖುಷಿಯಾಗುತ್ತಿದೆ ನಾನು ಯಾವುದೇ ಸಮುದಾಯಕ್ಕೆ ಸೀಮಿತನಾಗಿಲ್ಲಾ.
ಎಲ್ಲಾ ಸಮುದಾಯದವರು ನನ್ನವರೇ. ನಾನು ಜಾತಿವಾರು ರಾಜಕಾರಣ ಮಾಡಿಲ್ಲಾ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಶಾಸಕರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗೆ ಒಂದು ಕೊಳವೆ ಬಾವಿ ಹಾಕಲಿಲ್ಲಾ.
ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಹಾಗೂ ರೈಲ್ವೆ ಕೋಚ್ ಪ್ಯಾಕ್ಟರಿಗೆ ಭೂಮಿ ಪೂಜೆ ಮಾಡಿದರು. ಆದರೆ ಯಾವುದೇ ಕಾಮಗಾರಿ ಆರಂಭವಾಗಲಿಲ್ಲಾ. ಕೇವಲ ಶ್ರೀ ಶಕ್ತಿ ಸಂಘಗಳಿಗೆ ಸಾಲ ಕೊಟ್ಟು ಮಾತಯಾಚನೆ ಮಾಡುತ್ತಾರೆಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ರೀನಿವಾಸ್ ಮುಖಂಡರಾದ ತೂಪಲ್ಲಿ ನಾರಾಯಣಸ್ವಾಮಿ, ಕುಂದಿಟಿವಾರಪಲ್ಲಿ ಶಿವಾರೆಡ್ಡಿ, ಪೋಲು ಶಿವಾರೆಡ್ಡಿ, ಅಂಬೇಡ್ಕರ್ ಪಾಳ್ಯ ರವಿ, ಹೋಳೂರ್ ಸಂತೋಷ್ ಮೊದಲಾವರಿದ್ದರು.