PLACE YOUR AD HERE AT LOWEST PRICE
ಕೆಜಿಎಫ್:ಕನ್ನಡ ನಾಡಿನ ಮೊದಲ ಮುಖ್ಯಮಂತ್ರಿಗಳ ತವರೂರು ಕ್ಯಾಸಂಬಳ್ಳಿಯಲ್ಲಿ ಈ ಕೂಡಲೆ ಸರ್ಕಾರ ಕಾಲೇಜು ಆರಂಭಿಸಬೇಕು ಎಂದು ಬೂಚೆಪಲ್ಲಿ ಬಿ.ಜಿ.ರಮೇಶ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಮತ್ತು ಶಾಸಕರಿಗೆ ಮನವಿ ನೀಡಿದ್ದಾರೆ.
ಮನವಿಯಲ್ಲಿ ಕರ್ನಾಟಕ ರಾಜ್ಯದ ಆಗಿನ (ಮೈಸೂರ್ ರಾಜ್ಯ) ಮೊಟ್ಟ ಮೊದಲ ಮುಖ್ಯಮಂತ್ರಿ ಹಾಗೂ ಸ್ವಾತಂತ್ರ ಹೋರಾಟಗಾರರಾದ ದಿವಂಗತ ಶ್ರೀ ಕೆ.ಸಿ.ರೆಡ್ಡಿ (ಕೆ. ಚೆಂಗಲರಾಯ ರೆಡ್ಡಿ) ಕೋಲಾರ ಜಿಲ್ಲೆಯ, ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದವರಾಗಿದ್ದರು.
ಈ ಗ್ರಾಮ ಹೋಬಳಿ ಕೇಂದ್ರವಾಗಿದ್ದು ಹಾಗೂ ಹೊರ ರಾಜ್ಯಗಳ ಗಡಿ ಭಾಗವಾಗಿರುವ ಈ ಭಾಗದಲ್ಲಿ ಹಿಂದಿನ ಸರ್ಕಾರಗಳು ಇಲ್ಲಿನ ಶಿಕ್ಷಣಕ್ಕೆ ಆದ್ಯತೆ ನೀಡದೆ ದ್ರೋಹ ಮಾಡಿದ್ದು, ಈ ಕ್ಯಾಸಂಬಳ್ಳಿ ಸುತ್ತುಮುತ್ತಲು 8 ಪ್ರೌಡ ಶಾಲೆಗಳ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ.
10 ನೆ ತರಗತಿ ಉತೀರ್ಣರಾದ ಮೇಲೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ 30/40 ಕಿ ಮಿ ಗಳು ಹೋಗಬೇಕಾಗಿದ್ದರಿಂದ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಸರಿಯಿಲ್ಲ. ಆರ್ಥಿಕವಾಗಿ ಚನ್ನಾಗಿರುವ ವಿದ್ಯಾರ್ಥಿಗಳು ಮುಂದಿನ ವ್ಯಾಸಂಗಕ್ಕೆ ಹೋಗುತ್ತಾರೆ.
ಈ ಹಿಂದೆ ಸಾರ್ವಜನಿಕರ ಮನವಿ ಮೇಲೆ ಕೋಲಾರದ ಪಿ.ಯು. ಉಪ ನಿರ್ದೇಶಕರು ಕ್ಯಾಸಂಬಳ್ಳಿ ಪ್ರೌಡ ಶಾಲೆಗೆ ಭೇಟಿ ನೀಡಿ ಮತ್ತು ಸುತ್ತಲೂ 8 ಪ್ರೌಡ ಶಾಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತರೆ.
,ಈ ಭಾಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ವಂಚಿತರಾಗಿರುವುದನ್ನು ಕಂಡು ಪಿ. ಯು. ಕಾಲೇಜ್ ಪ್ರಾರಂಭಿಸಬೇಕೆಂದು ಕೋಲಾರ ಪಿ.ಯು ಉಪನಿರ್ದಶಕರಿಗೆ ಸ್ಥಳೀಯ ಅಧಿಕಾರಿಗಳು ವರದಿಸಲ್ಲಿಸಿರುತ್ತಾರೆ.
ಇದರಂತೆ ಕೋಲಾರ ಪಿ.ಯು ಉಪನಿರ್ದಶಕರು ಸುಮಾರು ವರ್ಷಗಳಿಂದ ಸರ್ಕಾರಕ್ಕೆ ವರದಿಗಳು ಕಳುಹಿಸಿರುತ್ತಾರೆ ಹಾಗೂ ಈ ಭಾಗದ ಶಾಸಕರು ಸಹ ಇಲ್ಲನ ಮಕ್ಕಳ ಶೈಕ್ಷಣಿಕ ಸ್ಥತಿಗತಿಯನ್ನು ಸರಿಪಡಿಸಿ ಕಾಲೇಜು ಮಂಜೂರಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.
13/2/23 ರಂದು ಪಿ.ಯು ಕಾಲೇಜ್ ಪ್ರಾರಂಭಿಸಬೇಕು ಮತ್ತು ಪ್ರೌಡ ಶಾಲೆಗೆ ಮತ್ತು ಪಿ.ಯು ಕಾಲೇಜಿಗೆ ಸರ್ಕಾರಿ ಜಮೀನು 11.20 ಎಕರೆ ಮಂಜೂರಾಗಿದ್ದು ಕಟ್ಟಡಗಳು ಪ್ರಾರಂಭಿಸಲು ಹಣ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಿರುತ್ತಾರೆ.
ಈ ಕೂಡಲೆ ಪಿ.ಯು ಕಾಲೇಜ್ ಪ್ರಾರಂಭಿಸಬೇಕು ಡಾ. ಬಿ ಆರ್ ಅಂಬೇಡ್ಕರ್ ರವರ ಹೇಳಿದ ಮಾತಿನಂತೆ ಎಲ್ಲರೂ ಶಿಕ್ಷಣ ಪಡೆಯಬೇಕು ಎಂಬ ಆಶಯಕ್ಕೆ ಬೆಂಬಲ ನೀಡಿ ಸಾರ್ವಜನಿಕರ ಹಿತ ದೃಷ್ಟಯಿಂದ ಸರ್ಕಾರವು ಪಿ.ಯು ಕಾಲೇಜು ಪ್ರಾರಂಭಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.