• Mon. Apr 29th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕಿನ ಎಲ್ಲಾ21 ಗ್ರಾಮ ಪಂಚಾಯಿತಿಗಳಲ್ಲಿ 2ನೇ ಅವಧಿಗೆ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳ ಮೀಸಲಾತಿ ಇಂದು ನಿಗದಿಗೊಳಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ವಿವರ ನೀಡಿದರು.

ಪಟ್ಟಣದ ಬಾಲಚಂದರ್ ಚಿತ್ರಮಂದಿರದಲ್ಲಿ ನಡೆದ ಮೀಸಲು ನಿಗದಿಗೊಳಿಸಿ ನಂತರ ಅವರು ಮಾತನಾಡಿ,  ತಾಲ್ಲೂಕಿನ 21 ಗ್ರಾಮ ಪಂಚಾಯಿತಿ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳ ಮೀಸಲಾತಿ ವಿವರ ನೀಡಿದರು.

ಅದ್ಯಕ್ಷ ಸ್ಥಾನಕ್ಕೆ:

ಪರಿಶಿಷ್ಟ ಜಾತಿ ಮಹಿಳಾ ಮೀಸಲು ಹುಲಿಬೆಲೆ, ಕೆಸರನಹಳ್ಳಿ, ಮಾಗೊಂದಿ, ಯಳೇಸಂದ್ರ.  ಪರಿಶಿಷ್ಟ ಜಾತಿ ಮೀಸಲು ಮಾವಹಳ್ಳಿ, ಐನೋರಹೊಸಹಳ್ಳಿ, ಕೇತಗಾನಹಳ್ಳಿ, ಕಾಮಸಮುದ್ರ.

ಪರಿಶಿಷ್ಟ ಪಂಗಡ ಮಹಿಳಾ ಮೀಸಲು ಚಿಕ್ಕಅಂಕಂಡಹಳ್ಳಿ.  ಬಿಸಿಎ ಮಹಿಳಾ ಮೀಸಲು ಬಲಮಂದೆ. ಸಾಮಾನ್ಯ ಮಹಿಳಾ ಮೀಸಲು ಸೂಲಿಕುಂಟೆ, ಹುನ್ಕುಂದ, ಚಿನ್ನಕೋಟೆ, ಆಲಂಬಾಡಿಜ್ಯೋತೇನಹಳ್ಳಿ, ಗುಲ್ಲಹಳ್ಳಿ. ಸಾಮಾನ್ಯ ದೊಡ್ಡೂರುಕರಪನಹಳ್ಳಿ, ಕಾರಹಳ್ಳಿ, ದೊಡ್ಡವಲಗಮಾದಿ, ಬೂದಿಕೋಟೆ, ತೊಪ್ಪನಹಳ್ಳಿ, ದೋಣಿಮಡಗು.

ಉಪಾದ್ಯಕ್ಷ ಸ್ಥಾನಕ್ಕೆ:

ಪರಿಶಿಷ್ಟ ಜಾತಿ ಮಹಿಳಾ ಮೀಸಲು ದೊಡ್ಡೂರುಕರಪನಹಳ್ಳಿ, ಕಾರಹಳ್ಳಿ, ದೊಡ್ಡವಲಗಮಾದಿ, ತೊಪ್ಪನಹಳ್ಳಿ. ಪರಿಶಿಷ್ಟ ಜಾತಿ ಮೀಸಲು ಸೂಲಿಕುಂಟೆ, ಚಿನ್ನಕೋಟೆ, ಆಲಂಬಾಡಿಜ್ಯೋತೇನಹಳ್ಳಿ, ಬೂದಿಕೋಟೆ.

ಪರಿಶಿಷ್ಟ ಪಂಗಡ ಮಹಿಳಾ ಮೀಸಲು ಬಲಮಂದೆ. ಬಿಸಿಎ ಮಹಿಳಾ ಮೀಸಲು  ಹುನ್ಕುಂದ. ಸಾಮಾನ್ಯ ಮಹಿಳಾ ಮೀಸಲು ಮಾವಹಳ್ಳಿ, ಐನೋರಹೊಸಹಳ್ಳಿ, ಕೇತಗಾನಹಳ್ಳಿ, ಕಾಮಸಮುದ್ರ, ದೋಣಿಮಡಗು. ಸಾಮಾನ್ಯ ಚಿಕ್ಕಅಂಕಂಡಹಳ್ಳಿ, ಹುಲಿಬೆಲೆ, ಕೆಸರನಹಳ್ಳಿ, ಮಾಗೊಂದಿ, ಯಳೇಸಂದ್ರ, ಗುಲ್ಲಹಳ್ಳಿ ನಿಗಧಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾಹಿತಿ ನೀಡಿದರು.

ಮೀಸಲು ಬಗ್ಗೆ ಹಿಂದೆಯೇ  ಅಂದಾಜು ಮಾಡಿದ್ದ ರಾಜಾರೆಡ್ಡಿ:

ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೇಕೊತ್ತೂರು ರಾಜಾರೆಡ್ಡಿರವರು ಬಂಗಾರಪೇಟೆ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗಳ ಅದ್ಯಕ್ಷ ಉಪಾದ್ಯಕ್ಷರ ಮೀಸಲು ಸ್ಥಾನಗಳ ಬಗ್ಗೆ ಕಳೆದ 20 ವರ್ಷಗಳಿಂದ  ಸರ್ಕಾರ ನಿಗದಿಗೊಳಿಸುವುದಕ್ಕೂ 10-20ದಿನ ಮುಂಚಿತವಾಗಿ ಅಂದಾಜು ಲೆಕ್ಕಾಚಾರ ಮಾಡುತ್ತಾ ಬರುತ್ತಿದ್ದರು.

ಅವರ ಲೆಕ್ಕಾಚಾರ ಮೊದಲೆಲ್ಲಾ ಶೇ 95 ನಿಜವಾಗುತ್ತಿತ್ತು. ಈ ಬಾರಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅದ್ಯಕ್ಷ ಉಪಾದ್ಯಕ್ಷರ ಮೀಸಲು ಬಗ್ಗೆ ಅವರ ಲೆಕ್ಕಾಚಾರ ಶೇ100 ನಿಜನವಾಗಿದೆ.

ರಾಜಾರೆಡ್ಡಿರವರು ಮೊದಲೇ ಮಾಡಿದ್ದ ಲೆಕ್ಕಾಚಾರ ಇಲ್ಲಿದೆ ಕ್ಲಿಕ್ ಮಾಡಿ: ಗ್ರಾಪಂ ಅದ್ಯಕ್ಷ ಉಪಾದ್ಯಕ್ಷ ಸಂಭವನೀಯ ಮೀಸಲು ಪಟ್ಟಿ ತಯಾರಿಸಿದ ರಾಜಾರೆಡ್ಡಿ. (nammasuddi.net)

ಇದನ್ನೂ ಓದಿ: ತಾಲ್ಲೂಕಿನ ಗ್ರಾಪಂ ಅದ್ಯಕ್ಷರ ಸಂಭವನೀಯ ಮೀಸಲು ಪಟ್ಟಿ ತಯಾರಿಸಿದ ರಾಜಾರೆಡ್ಡಿ. (nammasuddi.net)

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!