PLACE YOUR AD HERE AT LOWEST PRICE
ಕೆಜಿಎಫ್:ಕಾಮಸಮುದ್ರ-ಬೋಡಗುರ್ಕಿ ಗ್ರಾಮಕ್ಕೆ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡಿರುವ ಬೋಡಗುರ್ಕಿ ಚಲೋದಲ್ಲಿ ಸಾರ್ವಜನಿಕರು ಪಕ್ಷಾತೀತವಾಗಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಜಾತಿ ಪದ್ದಾಂತಿಯನ್ನು ನಿರ್ಮೂಲನೆ ಮಾಡಬೇಕೆಂದು ಜೈಭೀಮ್ ಸಂಘಟನೆಯ ಶ್ರೀನಿವಾಸ್ ಹೇಳಿದರು.
ಬೇತಮಂಗಲ ಗ್ರಾಮದ ಪ್ರವಾಸಿ ಮಂದಿರದಲ್ಲಿ ಬೋಡಗುರ್ಕಿ ಚಲೋ ಮುಖ್ಯಸ್ಥರಾದ ಜೈಭೀಮ್ ಶ್ರೀನಿವಾಸ್, ಕುಡಗಲ್ಲು ಬಾಬು, ನಾಸ್ತಿಕ್ ಶ್ರೀನಾಥ್ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದರೂ ಸಹ ಸಮಾಜದಲ್ಲಿ ಮಾತ್ರ ಜಾತಿ ಪದ್ಧತಿ ಕಡಿಮೆಯಾಗದೆ, ದಿನೇ ದಿನೇ ಹೆಚ್ಚುತ್ತಿರುವುದು ದುರದೃಷ್ಠ ಸಂಗತಿಯಾಗಿದೆ ಎಂದರು.
ಬೋಡಗುರ್ಕಿ ಗ್ರಾಮದಲ್ಲಿ ದಲಿತ ಯುವಕನನ್ನು ಪ್ರೀತಿ ಮಾಡಿದ್ದಾಳೆ ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಹತ್ಯೆ ಮಾಡಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಹುಡುಗಿಯ ಹತ್ಯೆಯ ವಿಷಯ ತಿಳಿದು ಯುವಕನೂ ಸಹ ಅತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಕುಟುಂಬ ಬೀದಿಗೆ ಬಂದಿದೆ. ಇದರಿಂದ ಬೋಡಗುರ್ಕಿ ಚಲೋ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರು ಕಲಿಸದಂತೆ ಅರಿವು ಮೂಡಿಸುವುದಾಗಿ ತಿಳಿಸಿದರು.
ಯುವ ಮುಖಂಡ ನಾಸ್ತಿಕ್ ಶ್ರೀನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹಾಗೂ ನೆರಯ ರಾಜ್ಯಗಳಲ್ಲಿ ದಲಿತ ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಬೋಡಗುರ್ಕಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಯಾರ ವಿರುದ್ಧದ ಹೋರಾಟವು ಅಲ್ಲ ಪ್ರತಿಭಟನೆಯೂ ಅಲ್ಲ, ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡುವುದರ ಬಗ್ಗೆ ಅರಿವು ಮೂಡಿಸುವ ಚಲೋ ಆಗಿದೆ ಎಂದರು.
ಕಾಮಸಮುದ್ರ-ಬೋಡಗುರ್ಕಿ ಗ್ರಾಮದ ವರೆಗೂ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಚಲೋ ಕಾರ್ಯವು ಸಾವಿರಾರೂ ಮಂದಿಯೊಂದಿಗೆ ಶಾಂತಿ ಯುತವಾಗಿ ನಡೆಯಲಿದೆ. ಬೋಡಗುರ್ಕಿ ಚಲೋಗೆ ಪೊಲೀಸ್ ಇಲಾಖೆಯೂ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು. ಪೋಲಿಸ್ ಇಲಾಖೆಗೆ ದಲಿತ ಸಂಘಟನೆಗಳಿಂದ ಅಭಿನಂದನೆ ಸಲ್ಲಿಸಿದರು.
ಈಗಾಗಲೇ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬೋಡಗುರ್ಕಿ ಘಟನೆಗೆ ಅಗತ್ಯ ಕ್ರಮ ಕೈಗೊಂಡು, ಯುವಕನ ಕುಟುಂಬಕ್ಕೆ ಪರಿಹಾರ ದೊರಕಿಸಿರುವುದು ಶ್ಲಾಘನೀಯ ಸಂಗತಿ ಎಂದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಕುಡಗಲ್ ಬಾಬು, ನಾಸ್ತಿಕ್ ಶ್ರೀನಾಥ್, ಕೆಜಿಎಫ್ ಶಂಕರ್, ಶ್ರೀಧರ್ ಇದ್ದರು.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.