PLACE YOUR AD HERE AT LOWEST PRICE
ಮಾಲೂರು : ಜುಲೈ.೧೬ಕ್ಕೆ ನವೀಕರಿಸಲಾದ ಮಲಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಹಸ್ತಾಂತರ ಹಾಗೂ
ಉದ್ಘಾಟನೆಯನ್ನು ಶಾಸಕ ಕೆ.ವೈ.ನಂಜೇಗೌಡ ನೆರವೇರಿಸಲಿದ್ದಾರೆ.
ತಾಲ್ಲೂಕಿನ ಮಾಸ್ತಿ ಹೋಬಳಿಯ ಮಲಕನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು, ಶಿಕ್ಷಣ ಹಾಗೂ ಅರೋಗ್ಯ ಸೇವೆಯಲ್ಲಿ ಕ್ರಾಂತಿಗೆ ನಾಂದಿ ಹಾಡಿರುವ ತಾಲ್ಲೂಕಿನಾದ್ಯಂತ ಮನೆಮಾತಾಗಿರುವ ಸಮಾಜಸೇವಕ ಡಾ.ಕಿರಣ್ಸೋಮಣ್ಣ ಸ್ವಯಂ ಸೇವಾ ದೃಷ್ಟಿಯಿಂದ ತಮ್ಮ ಸ್ವಂತ ಹಣದಲ್ಲಿ ಇಡೀ ಶಾಲೆಯನ್ನು ದುರಸ್ಥಿಗೊಳಿಸಿ, ನವೀಕರಿಸಲಾದ ಸುಸಜ್ಜಿತ ಶಾಲಾ ಕಟ್ಟಡವಾಗಿ ಮಾರ್ಪಡಿಸಿದ್ದಾರೆ. ಸುಸಜ್ಜಿತವಾಗಿರುವ ಶೃಂಗಾರಗೊoಡ ಈ ಕಟ್ಟಡವನ್ನು ಇದೇ ಜುಲೈ ೧೬ರ ಭಾನುವಾರದಂದು ಇಲಾಖಾಧಿಕಾರಿಗಳಿಗೆ ಹಸ್ತಾಂತ ಮಾಡಲಿದ್ದಾರೆ.
ಭಾನುವಾರ ಮದ್ಯಾಹ್ನ ೧೨ ಗಂಟೆಗೆ ನಡೆಯುವ ಉದ್ಘಾಟನಾ ಸಭೆಗೆ ಮಾನ್ಯ ಜಿಲ್ಲಾ ದಂಡಾಧಿಕಾರಿಗಳು, ಮಾಲೂರಿನ ಜನಪ್ರಿಯ ಶಾಸಕ ಕೆ.ವೈ.ನಂಜೇಗೌಡ ಭಾಗವಹಿಸಲಿದ್ದಾರೆ. ಈ ಸಮಾಜ ಮುಖಿ ಕಾರ್ಯಕ್ರಮಕ್ಕೆ ಮಾಸ್ತಿ ಹಾಗೂ ಮಲಕನಹಳ್ಳಿ ಗ್ರಾಮಸ್ಥರು ಹಾಗೂ ಮಾಸ್ತಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.