PLACE YOUR AD HERE AT LOWEST PRICE
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಮಹಾಘಟಬಂಧನ್ ಸಭೆಯನ್ನು ‘ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇಳನ’ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ನ ಪೋರ್ಟ್ ಬ್ಲೇರ್ನಲ್ಲಿರುವ ಸಾವರ್ಕರ್ ವಿಮಾನ ನಿಲ್ದಾಣದಲ್ಲಿನ ಹೊಸ ಟರ್ಮಿನಲ್ ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ ಸಂದರ್ಭ ಈ ರೀತಿ ಹೇಳಿದರು.
“ಅಲ್ಲಿ ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇಳನ ನಡೆಯುತ್ತಿದೆ. ಕಳೆದ 9 ವರ್ಷಗಳಲ್ಲಿ, ನಾವು ಹಳೆಯ ಸರ್ಕಾರಗಳ ತಪ್ಪುಗಳನ್ನು ಸರಿಪಡಿಸಿದ್ದೇವೆ. ಮಾತ್ರವಲ್ಲದೆ, ಜನರಿಗೆ ಹೊಸ ಸೌಲಭ್ಯಗಳು ಮತ್ತು ಮಾರ್ಗಗಳನ್ನು ಒದಗಿಸಿದ್ದೇವೆ. ಇಂದು, ಭಾರತದಲ್ಲಿ ಹೊಸ ಅಭಿವೃದ್ಧಿಯ ಮಾದರಿಯಾಗಿದೆ. ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮಾದರಿಯಾಗಿದೆ. ಸಬ್ಕಾ ವಿಕಾಸ್ ಎಂಬ ಪದಕ್ಕೆ ಬಹಳ ದೊಡ್ಡ ಅರ್ಥವಿದೆ ಎಂದು ಹೇಳಿದರು.
ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಇಂದು ಅವರ ಗಮನ ಕುಟುಂಬ ಮಾತ್ರ, ದೇಶವಲ್ಲ. ಅವರಿಗೆ ಕುಟುಂಬ ಮೊದಲು, ರಾಷ್ಟ್ರ ಏನೂ ಅಲ್ಲ. ಭ್ರಷ್ಟಾಚಾರವೇ ಅವರ ಉದ್ದೇಶ” ಎಂದು ಹೇಳಿದರು.
“ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ. ಆದರೆ ಪ್ರತಿಪಕ್ಷಗಳ ಮಂತ್ರ – ಕುಟುಂಬ, ಕುಟುಂಬ, ಕುಟುಂಬಕ್ಕಾಗಿ. ಅವರಿಗೆ ಅವರ ಕುಟುಂಬವು ಮೊದಲನೆಯದು ಹಾಗಾಗಿ ರಾಷ್ಟ್ರವು ಏನೂ ಅಲ್ಲ. ವಿರೋಧ ಪಕ್ಷಗಳಿಗೆ ದೇಶದ ಬಡವರ ಮಕ್ಕಳ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ” ಎಂದು ಜರೆದರು.