PLACE YOUR AD HERE AT LOWEST PRICE
ಮುಳಬಾಗಿಲು:ಸಾಲಬಾದೆ ತಾಳಲಾರದೇ ಚಾಲಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಸಾದಪ್ಪನಹಳ್ಳಿ ಗ್ರಾಮದ ಅಶ್ವಥಪ್ಪ (59), ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಮೃತ ವ್ಯಕ್ತಿ ಟಾಟಾ ಏಸ್ ಚಾಲಕನಾಗಿದ್ದು ವಿವಿಧ ಕಾರಣಗಳಿಂದ ಸಾಕಷ್ಟು ಸಾಲಸೂಲ ಮಾಡಿಕೊಂಡಿದ್ದು, ಜುಲೈ 13 ರಂದು ಹಣ ತರುವುದಾಗಿ ಮನೆಯಿಂದ ಹೊರ ಹೋಗಿದ್ದ ಎನ್ನಲಾಗಿದೆ.
ಮಂಗಳವಾರ ಮುಳಬಾಗಿಲು ತಾಲೂಕಿನ ಕಾಮನೂರು ಶ್ರೀರಾಮಪ್ಪ ಎಂಬುವರ ನೇರಳೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತದೇಹವು ಸಾಕಷ್ಟು ಕೊಳೆತು ದುರ್ವಾಸನೆ ಉಂಟಾಗಿರುವುದು ಕಂಡು ಬಂದಿತ್ತು, ರೈತ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯ ಪಿಎಸ್ಐ ವಿಠಲ್ತಳವಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಮೃತನ ಬೇಬಿನಲ್ಲಿದ್ದ ದಾಖಲೆಗಳಂತೆ ಮೃತನ ವಿಳಾಸವನ್ನು ಪತ್ತೆ ಹಚ್ಚಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ.