PLACE YOUR AD HERE AT LOWEST PRICE
ದ ಗುಂಪು .
ಕೆಜಿಎಫ್:ಬೇತಮಂಗಲ ಹೋಬಳಿ ಸುಂದರಪಾಳ್ಯ ಗ್ರಾಮದ ಹೊರ ವಲಯದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಗುಂಪಿನ ಮೇಲೆ ಬೇತಮಂಗಲ ಪೊಲೀಸ್ ಠಾಣೆಯ ಪಿಎಸೈ ಸತೀಶ್ ನೇತೃತ್ವದಲ್ಲಿ ದಾಳಿ ನಡೆಸಿ ತಂಬಾಕು ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಂದರಪಾಳ್ಯ ಗ್ರಾಮದ ಹೊರ ಭಾಗದ ಕಾರಿಡಾರ್ ರಸ್ತೆಯ ಬಳಿ ಮೂವರು ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಸುಮಾರು 270ಗ್ರಾಂ ಗಾಂಜಾ ಸಮೇತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಗಾಂಜಾ ಮಾರಾಟದಲ್ಲಿ ಸುಂದರಪಾಳ್ಯ ಗ್ರಾಮದ ಸೈಯದ್ ಸಹಿಬ್ ಉಲ್ಲಾ ಹುಸೇನಿ, ಸೈಯದ್ ಕೈಫ್ ಹಾಗೂ ಸೈಯದ್ ಹಾಲಿ ಎಂಬ ಮೂವರು ಆರೋಪಿಗಳನ್ನು ಬೇತಮಂಗಲ ಪೊಲೀಸರು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ.
ಈ ಗಾಂಜಾ ವಶಕ್ಕೆ ಪಡೆಯಲು ದಾಳಿ ನಡೆಸಿದ ತಂಡದಲ್ಲಿ ಪಿಎಸೈ ಸತೀಶ್, ಸಿಬ್ಬಂದಿಗಳಾದ ನಟರಾಜ್, ಗಜೇಂದ್ರ, ಶ್ರೀನಿವಾಸ್, ಸಿಂಧು, ಮುರಳಿ, ಸಂಪಂಗಿ ಇದ್ದರು.