• Sat. May 4th, 2024

PLACE YOUR AD HERE AT LOWEST PRICE

ಕೆಜಿಎಫ್:ಹಾಡ ಹಗಲೇ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಸುಮಾರು 11ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳರು ಅಪಹರಣ ಮಾಡಿರುವ ಘಟನೆ ಉರಿಗಾಂನಲ್ಲಿ ನಡೆದಿದೆ.

ಮನೆಯ ಒಡತಿ ಕಸ್ತೂರಿ ಈ ಸಂಬಂಧವಾಗಿ ಉರಿಗಾಂ ಪೋಲಿಸರಿಗೆ ದೂರು ನೀಡಿದ್ದಾರೆ. ಕಸ್ತೂರಿ ಮತ್ತು ಅವರ ಕುಟುಂಬದವರು ಹುಟ್ಟುಹಬ್ಬದ ಸಂಭ್ರಮಾಚರಣೆಗೆಂದು ಬೆಳಿಗ್ಗೆ ಚರ್ಚ್ ಗೆ ಹೋಗಿದ್ದರು.

ಆಚರಣೆ ಮುಗಿಸಿಕೊಂಡು ಮದ್ಯಾನ್ಹ ಮರಳಿ ಮನೆಗೆ ಬರುವಷ್ಟರಲ್ಲಿ ಮನೆಯ ಹಿಂಬಾಗಿಲನ್ನು ಜಖಂಗೊಳಿಸಿರುವ ಕಳ್ಳರು ಮನೆಯ ಬೀರುವಿನಲ್ಲಿದ್ದ ಸುಮಾರಿ 100 ಗ್ರಾಮ ಚಿನ್ನದ ಆಭರಣಗಳು ಮತ್ತು 5 ಲಕ್ಷ ರೂಪಾಯಿ ಹಣವನ್ನು ದೋಚಿದ್ದಾರೆ.

ಕಳ್ಳತನಕ್ಕೆ ಒಳಗಾದ ಮನೆ ಎಸ್.ಪಿ ಬಂಗಲೆಯ ಕೂಗಳತೆ ದೂತದಲ್ಲದ್ದು, ಮನೆಯ ಪಕ್ಕದಲ್ಲಿಯೇ ಭದ್ರತೆ ಇರುವ ಬಿಜಿಎಂಎಲ್ ವ್ಯವಸ್ಥಾಪಕ ನಿರ್ಧೇಶಕರ ಬಂಗ್ಲೆ ಕೂಡ ಇದೆ. ಇಷ್ಟೆಲ್ಲಾ ಭದ್ರತೆ ಇರುವ ಪ್ರದೆಶದಲ್ಲಿ ಹಾಡು ಹಗಲೇ ಕಳ್ಳತನವಾಗಿರುವುದು ಬಡಾವಣೆ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ.

ಡಿ.ವೈ.ಎಸ್.ಪಿ ವಿ.ಎಲ್.ರಮೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ಉರಿಗಾಂ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವೆರೆಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!