PLACE YOUR AD HERE AT LOWEST PRICE
ಬಂಗಾರಪೇಟೆ:ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನಲೆ ಅಲ್ಲಲ್ಲಿ ಕಳ್ಳತನ ಸೇರಿದಂತೆ ಬೆಳೆ ನಾಶ ಪ್ರಕರಣಗಳು ಹೆಚ್ಚಾಗಿ ಕೇಳಿ ಬಂದಿದೆ. ತಾಲೂಕಿನ ಎಸ್.ಮಾದಮಂಗಲ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಟೊಮ್ಯಾಟೊ ಗಿಡಗಳನ್ನ ಕಿಡಿಗೇಡಿಗಳು ಬುಡ ಸಮೇತ ನಾಶ ಮಾಡಿದ್ದಾರೆ.
ಮಾದಮಂಗಲ ಗ್ರಾಮದ ವೆಂಕಟಸ್ವಾಮಿ ಎಂಬ ರೈತ ತನ್ನ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದ, ಇನ್ನೇನು ನಾಲ್ಕೈದು ದಿನದಲ್ಲಿ ಫಸಲಿಗೆ ಬಂದಿರುವ ಟೊಮೆಟೊವನ್ನ ಮಾರುಕಟ್ಟೆಗೆ ಹಾಕಬೇಕಾಗಿತ್ತು.
ಆದರೆ ಕಳೆದ ರಾತ್ರಿ ಕಿಡಿಗೇಡಿಗಳು ಸುಮಾರು ಅರ್ಧ ಎಕರೆ ಟೊಮೆಟೊ ಬೆಳೆ ನಾಶ ಮಾಡಿದ್ದು, ಮೂರು ಸಾವಿರ ಟೊಮೆಟೊ ಗಿಡಗಳನ್ನ ಬುಡ ಸಮೇತ ಕಿತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಟೊಮ್ಯಾಟೊ ಬೆಳೆದಿದ್ದ ರೈತ ಇದೀಗ ಆತಂಕಕ್ಕೊಳಗಾಗಿದ್ದಾನೆ.
ಕಿಡಿಗೇಡಿಗಳ ಈ ಕೃತ್ಯಕ್ಕೆ ರೈತ ಕಂಗಾಲಾಗಿದ್ದು, ಸರ್ಕಾರ ರೈತನ ನೆರವಿಗೆ ಧಾವಿಸಬೇಕಿದೆ. ಘಟನಾ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಸಹ ಭೇಟಿ ನೀಡಿದ್ದು, ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.