• Sat. May 11th, 2024

PLACE YOUR AD HERE AT LOWEST PRICE

ಮಾನವ ಬಂಧುತ ವೇದಿಕೆ ಕೋಲಾರ ವತಿಯಿಂದ ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಗ್ರಾಮದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವ ಪಂಚಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಕ್ಕಳಿಗೆ ಹಾಲು ಮತ್ತು ಹಣ್ಣು ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್  ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರಾದ ಸುನಂದಮ್ಮ ಮಾನವ ಬಂಧುತ್ವ ವೇದಿಕೆಯ ಸುಮತಿ ಕ್ಯಾಸಂಬಳ್ಳಿ, ಶ್ರೀನಾಥ್ ನಾಸ್ತಿಕ್, ಬಾಬು, ಗೋವಿಂದ ಚೌಡಪ್ಪ, ಅಂಬರೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ  ಮಂಜುನಾಥ್ ಮಾತನಾಡಿ ಹಾಲು ಪೌಷ್ಟಿಕ ಆಹಾರ. ಅದನ್ನು ಹುತ್ತಕ್ಕೆ ಮತ್ತು ಕಲ್ಲು ನಾಗರಕ್ಕೆ ಸುರಿಯುವುದರಿಂದ ಹಾಲು ಪೋಲಾಗುತ್ತದೆ. ಇದು ಮೌಡ್ಯಾಚಾರಣೆ. ಇಂಥ ಆಚರಣೆಗಳನ್ನು ಕೈ ಬಿಡಬೇಕು ಎಂದು ಸಂದೇಶ ಕೊಟ್ಟರು.

ನಾಸ್ತಿಕ್ ಶ್ರೀನಾಥ್ ಮಾತನಾಡಿ ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲನ್ನು ಹಂಚೋಣ ಮತ್ತು ಸರ್ಪದ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಮಾತನಾಡುತ್ತಾ ಹಾವಿಗೆ ಮೆದುಳಿಲ್ಲ.

ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಕಟ್ಟುಕಥೆಗಳನ್ನು ಕಟ್ಟಿ ನಮ್ಮನ್ನು ಮೌಡ್ಯದಲ್ಲಿ ಮುಳುಗಿಸಿದ್ದಾರೆ. ಮೌಡ್ಯದಿಂದ ಹೊರಗೆ ಬಂದು ವೈಚಾರಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ  ನೀಡಿದರು.

ಮಾನವ ಬಂಧುತ್ವ ವೇದಿಕೆಯ ಸುಮತಿ ಕ್ಯಾಸಂಬಳ್ಳಿ ಮಾತನಾಡಿ ಮಾನವ ಬಂಧುತ್ವ ವೇದಿಕೆಯ ಕಿರು ಪರಿಚಯ ಮತ್ತು ಕಾರ್ಯವೈಕರಿಯ ಬಗ್ಗೆ ಮತ್ತುಬಸವ ಪಂಚಮಿಯ ಬಗ್ಗೆ ಹಾಗೂ ಬಸವ ಪಂಚಮಿಯ ಮೂಲ ಉದ್ದೇಶಗಳ ಬಗ್ಗೆ ಮಾತನಾಡಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!