PLACE YOUR AD HERE AT LOWEST PRICE
ಮುಳಬಾಗಿಲು ತಾಲ್ಲೂಕು ನಂಗಲಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿದೆ ಎಂದು ಮೃತ ಮುನಿರಾಜು ಪೋಷಕರು ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತನ ತಾಯಿ ರಾಮಲಕ್ಷ್ಮಮ್ಮ ನೀಡಿರುವ ದೂರಿನಲ್ಲಿ ನಂಗಲಿ ಪೊಲೀಸರ ಕಿರಕುಳದಿಂದ ಮಗನ ಸಾವಾಗಿದೆ ಎಂದು ದೂರಿದ್ದಾರೆ.
ಬೈಕ್ ಕಳುವು ಕೇಸ್ ವಿಚಾರಕ್ಕೆ ಸಂಬಂಧಪಟ್ಟಂತೆ ನಂಗಲಿ ಪೊಲೀಸರು ಆಂಧ್ರದ ಆವಲಪಲ್ಲಿಯ ಮುನಿರಾಜು ನನ್ನು ವಿಚಾರಣೆಗೆ ಕರೆತಂದಿದ್ದರು.
ಆಗಸ್ಟ್ 21 ರಂದು ವಿಚಾರಣೆಗೆ ಕರೆತಂದಿದ್ದಾಗಿ ತಾಯಿ ರಾಮಲಕ್ಷ್ಮಮ್ಮ ಹೇಳಿಳುತ್ತಿದ್ದಾರೆ. ಆಗಸ್ಟ್ 31 ರಂದು ವಿಚಾರಣೆಗೆ ಕರೆತಂದು ಸೆ 1 ರಂದು ವಾಪಾಸ್ ಕಳಿಸಿದ್ದಾಗಿ ಪೊಲೀಸರ ಮಾಹಿತಿ ನೀಡುತ್ತಿದ್ದಾರೆ.
ಮುನಿರಾಜುನನ್ನು ಅನಾರೋಗ್ಯದ ಕಾರಣ ಕೋಲಾರದ ಆರ್,ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಕಿರಕುಳದಿಂದಲೇ ಮುನಿರಾಜುಮ ಸಾವು ಸಂಭವಿಸಿಸದೆ ಎಂದು ತಾಯಿ ಮತ್ತು ಪೋಷಕರ ಆರೋಪ ಮಾಡಿದ್ದಾರೆ.
ಕೋಲಾರದ ಆರ್,ಎಲ್ ಜಾಲಪ್ಪ ಆಸ್ಪತ್ರೆಯಲ್ಲಿರುವ ಮುನಿರಾಜು ಮೃತದೇಹವಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.