• Sun. Apr 28th, 2024

PLACE YOUR AD HERE AT LOWEST PRICE

ಬೆಂಗಳೂರು:ಸ್ಮಾರ್ಟ್‌ಫೋನ್‌ ಏಕಾಏಕಿ ದೊಡ್ಡ ಬೀಪ್‌ ಸೌಂಡ್‌ ಮಾಡುತ್ತಿದೆಯೇ, ಜೋರಾಗಿ ವೈಬ್ರೆಟ್‌ ಆಯ್ತಾ. ಏನಾಯ್ತಪ್ಪ ಈ ಮೊಬೈಲ್‌ಗೆ ಅಂತಾ ಗಾಬರಿಯಾಗಬೇಡಿ. ಯಾಕಂದ್ರೇ ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆ ಎಮರ್ಜೆನ್ಸಿ ಅಲರ್ಟ್‌ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದು, ಗುರುವಾರ ಈ ಅಲರ್ಟ್‌ ಸೇವೆಯ ಪ್ರಯೋಗ ನಡೆಯುತ್ತಿದೆ.

ಹೌದು, ಭೂಕಂಪ, ಪ್ರವಾಹ ಸೇರಿ ಅನೇಕ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಜನರಿಗೆ ತ್ವರಿತಗತಿಯಲ್ಲಿ ಎಚ್ಚರಿಕೆ ನೀಡುವ ಉದ್ದೇಶದಿಂಂದ ಎಮರ್ಜೆನ್ಸಿ ಅಲರ್ಟ್‌ ಸೇವೆಯನ್ನು ದೂರ ಸಂಪರ್ಕ ಇಲಾಖೆ ಪರಿಚಯಿಸುತ್ತಿದೆ. ಇದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೈಜೋಡಿಸಿದೆ. ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಜನರಿಗೆ ಎಚ್ಚರಿಕೆ ಸಂದೇಶ ನೀಡಿ ಅವರನ್ನು ಸುರಕ್ಷಿತವಾಗಿರುವಂತೆ ಮಾಡುವ ಉದ್ದೇಶವನ್ನು ಈ ಸೇವೆ ಹೊಂದಿದೆ.

ಎಮರ್ಜೆನ್ಸಿ ಅಲರ್ಟ್‌ ಸೇವೆಯ ಪರೀಕ್ಷಾರ್ಥ ಪ್ರಯೋಗವೂ ಈಗಾಗಲೇ ಹಲವು ದೇಶಗಳಲ್ಲಿ ನಡೆದಿದ್ದು, ಕರ್ನಾಟಕದಲ್ಲಿ ಅಕ್ಟೋಬರ್‌ 12 (ಗುರುವಾರ) ಈ ಪ್ರಯೋಗ ನಡೆಯಲಿದೆ. ಭಾರೀ ಶಬ್ಧ ಮತ್ತು ವೈಬ್ರೆಟ್‌ನೊಂದಿಗೆ ಜನರು ಟೆಸ್ಟ್‌ ಎಮರ್ಜೆನ್ಸಿ ಅಲರ್ಟ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಂದಿದೆ. ಈ ಅಲರ್ಟ್‌ ಮೊದಲೇ ನಿಗದಿಪಡಿಸಿದ್ದು, ಯಾವುದೇ ತುರ್ತು ಪರಿಸ್ಥಿತಿ ಇರುವುದಿಲ್ಲ. ನಾಗರೀಕರು ಕೂಡ ಯಾವುದೇ ಆತಂಕಕ್ಕೊಳಗಾಗಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾಂಪಲ್ ಮೆಸೇಜ್ ಹೇಗಿರುತ್ತದೆ?

ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್​ಕ್ಯಾಸ್ಟಿಂಗ್ ಸಿಸ್ಟಂ ಮೂಲಕ ಕಳುಹಿಸಲಾದ ಸ್ಯಾಂಪಲ್ ಟೆಸ್ಟಿಂಗ್ ಮೆಸೇಜ್ ಇದು. ಈ ಸಂದೇಶಕ್ಕೆ ಸ್ಪಂದಿಸದೆ ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಜಾರಿಗೆ ತರಲಾಗುತ್ತಿರುವ ಭಾರತದಾದ್ಯಂತದ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಅನ್ನು ಪರೀಕ್ಷಿಸಲು ಈ ಸಂದೇಶ ಕಳುಹಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ಅಲರ್ಟ್ ನೀಡಲು ಮತ್ತು ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!