PLACE YOUR AD HERE AT LOWEST PRICE
ಕೆಜಿಎಫ್:ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಸುಮಾರು ವರ್ಷಗಳಿಂದ ಖಾಸಗಿ ಕಟ್ಟಡವು(ಮನೆ) ಹಲವು ವಿವಾಧಗಳಿಂದ ತೆರುವುಗೊಳ್ಳದೆ ಉಳಿದಿದ್ದ ಕಟ್ಟಡವನ್ನು ಗ್ರಾಪಂ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್ ನೇತೃತ್ವದಲ್ಲಿ ಗ್ರಾಪಂಯಿಂದ ತೆರುವುಗೊಳಿಸಲಾಯಿತು.
ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಸುಮಾರು ವರ್ಷಗಳಿಂದ ಒಂದು ಕುಟುಂಬ ಮನೆ ನಿರ್ಮಿಸಿಕೊಂಡಿದ್ದ ಮನೆಯನ್ನು ಗ್ರಾಪಂ ಅಧಿಕಾರಿಗಳು ಕಾನೂನಿನ ಮೂಲಕ ತೆರುವು ಗೊಳಿಸಿ ಶಾಲೆಗೆ ಅವರಣವನ್ನು ವಿಂಗಡಿಸಿದರು.
ಸರ್ಕಾರಿ ಶಾಲೆಯ ಅವರಣದಲ್ಲಿ ಹಲವು ವರ್ಷಗಳಿಂದ ಮನೆ ಇದ್ದ ಕಾರಣ ಶಾಲೆಯ ಅಭಿವೃದ್ಧಿ ಹಾಗೂ ಕಾಂಪೌಂಡ್ ನಿರ್ಮಾಣ ಕಾಮಗಾರಿಯೂ ಸಹ ಸ್ಥಗಿತವಾಗಿತ್ತು, ಶಾಲೆಯ ವಿದ್ಯಾರ್ಥಿಗಳಿಗೆ ಸೂಕ್ತ ಮೂಲ ಭೂತ ಸೌಲಭ್ಯಗಳ ಕೊರತೆಯಾಗಿತ್ತು.
ಈ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಕೆಜಿಎಫ್ ನ್ಯಾಯಲಯದ ನ್ಯಾಯಧೀಶರು ಸಹ ಶಾಲೆಗೆ ಭೇಟಿ ನೀಡಿ ಶೀಘ್ರವಾಗಿ ವಿವಾಧಕ್ಕೆ ಸಿಲುಕಿರುವ ಕಟ್ಟಡವನ್ನು ಇತ್ಯರ್ಥ ಪಡಿಸಿ ಮೂಲ ಭೂತ ಸೌಲಭ್ಯ ಕಲ್ಪಿಸಲು ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದ್ದರು.
ಗ್ರಾಪಂ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮೂರ್ತಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಮನೆಯ ಮಾಲೀಕರನ್ನು ಒಪ್ಪಿಸುವುದರಲ್ಲಿ ಯಶಸ್ವಿಯಾಗಿ ಶಾಲೆಯ ಅವರಣದಲ್ಲಿನ ಮನೆಯನ್ನು ಮಂಗಳವಾರ ತೆರುವು ಮಾಡಿ ಶಾಲೆಗೆ ವಿಶಾಲವಾದ ಜಾಗವನ್ನು ಗುರುತಿಸಿದರು.