PLACE YOUR AD HERE AT LOWEST PRICE
ಐಎಎಸ್ ಕನಸು ಕಂಡಿದ್ದ ಯುವತಿಯೋರ್ವಳ ದುರಂತ ಅಂತ್ಯ, ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆಂದು ಪೋಷಕರ ಆರೋಪ:
ಕೋಲಾರ, ನವೆಂಬರ್.೧೪ : ಮದುವೆಯಾಗಿ ಎರಡೂವರೆ ವರ್ಷಗಳ ಬಳಿಕ ಗಂಡನ ಮನಯಲ್ಲೇ ಅನುಮಾನಸ್ಪದವಾಗಿ ಸಾವಿಗೀಡಾದ ಘಟನೆ ಕೋಲಾರದಲ್ಲಿ ಜರುಗಿದೆ.
ನಗರದ ಎಸ್.ಎನ್.ಆರ್.ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಮೃತಳ ತಾಯಿ ಕೆ.ಜಿ.ಮೊಹಲ್ಲಾದ ನಿವಾಸಿ ಜಬೀನ್ ತಾಜ್, ವರದಕ್ಷಿಣೆ ಆಸೆಗಾಗಿ ನನ್ನ ಎರಡನೇ ಮಗಳು ಇಪ್ಪತ್ತೆರಡು ವರ್ಷಗಳ ಸೆಹರ್ ಅಜುಂ ರವರನ್ನು ನನ್ನ ಅಳಿಯ ಅಫ್ಜಲ್ ಬೇಗ್, ಮಾವ ಮಿರ್ಜಾ ಅಖೀಲ್ ಬೇಗ್ ಹಾಗೂ ಅತ್ತೆ ತನವೀರ್ ರವರುಗಳು ಸೇರಿಕೊಂಡು ಭಾನುವಾರ ರಾತ್ರಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳ ಹಿಂದೆ ವಿನಾಯಕ ನಗರ ನಿವಾಸಿ ಅಫ್ಜಲ್ ಬೇಗ್ ರವರಿಗೆ ನಾಲ್ಕು ಲಕ್ಷ ವರದಕ್ಷಿಣೆಯೊಂದಿಗೆ ಒಡವೆ ಹಾಗೂ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದು,ಒಂದು ವರ್ಷ ಚೆನ್ನಾಗಿ ಸಂಸಾರ ಮಾಡಿ ನಂತರದ ದಿನಗಳಲ್ಲಿ ವರದಕ್ಷಿಣೆಗಾಗಿ ಪ್ರತಿದಿನ ಚಿತ್ರಹಿಂಸೆ ನೀಡುತ್ತಿರುವ ಬಗ್ಗೆ ನನ್ನ ಮಗಳು ಹಲವು ಬಾರಿ ತಮ್ಮ ಬಳಿ ಹೇಳಿಕೊಂಡಿದ್ದರೆAದು ಹೇಳಿದರು.
ಐದು ಲಕ್ಷ ವರದಕ್ಷಿಣೆ ತರುವಂತೆ ಕಳೆದ ತಿಂಗಳ ೨೫ ರಂದು ಮನೆಯಿಂದ ಹೊರಗೆ ಕಳುಹಿಸಿದ್ದು,ನನ್ನ ಮಗನ ಮದುವೆ ಇದ್ದುದರಿಂದ ಅಳಿಯ ಕೇಳಿದ ವರದಕ್ಷಿಣೆ ಹಣ ನೀಡಲು ಸಾಧ್ಯವಾಗಿರಲಿಲ್ಲ.ತಾವೇ ಮಗಳಿಗೆ ಹಾಗೂ ಅಳಿಯನಿಗೆ ಸಮಾಧಾನ ಮಾಡಿ ಇದೇ ತಿಂಗಳ ೫ ರಂದು ಅಳಿಯನ ಮನೆಗೆ ಬಿಟ್ಟು ಬಂದಿದ್ದು,ಭಾನುವಾರ ರಾತ್ರಿ ಫೋನ್ ಮಾಡಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ನಾವು ಹೋಗುವಷ್ಟರಲ್ಲಿ ಮಗಳ ಮೃತ ದೇಹವನ್ನು ಮಂಚದ ಮೇಲೆ ಮಲಗಿಸಿದ್ದು, ಯಾವುದೇ ಆತ್ಮಹತ್ಯೆ ಲಕ್ಷಣಗಳು ಕಂಡುಬರದೆ ಕತ್ತಿನ ಮೇಲೆ ಉಗುರಿನ ಗುರುತುಗಳು ಕಂಡು ಬಂತು ಹಾಗೂ ರೂಂ ಚಿಲಕ ಕಿತ್ತಿರುವ ಯಾವುದೇ ಕುರುಹು ಕಂಡು ಬೀರಲಿಲ್ಲ, ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರೂ ಪೋಲಿಸರಿಗೆ ತಿಳಿಸದೆ ಮಗಳ ದೇಹವನ್ನು ಯಾಕೆ ಕೆಳಗೆ ಇಳಿಸಿದರು.ಇದಲ್ಲವನ್ನೂ ನೋಡಿದರೆ ನನ್ನ ಮಗಳನ್ನು ಕೊಲೆ ಮಾಡಿದ್ದಾರೆಂಬ ಅನುಮಾನ ಬಂದೇ ಬರುತ್ತದೆ ಎಂದು ಹೇಳಿದರು.
ಭಾನುವಾರ ರಾತ್ರಿ ಗಲ್ಪೇಟೆ ಪೋಲಿಸರು ಮಹಜರ್ ನಡೆಸಿದ್ದಾರೆ. ಪೋಲಿಸರು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಜರಗಿಸ ಬೇಕೆಂದು ಒತ್ತಾಯಿಸಿದರು.